ಕರ್ನಾಟಕ

karnataka

By

Published : Jan 18, 2022, 2:22 PM IST

ETV Bharat / bharat

ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ಶಾಲೆಗೆ ಹೋಗಲೆಂದು ತಾವೇ ನಿರ್ಮಿಸಿಕೊಂಡ ಚಿಣ್ಣರು!

ಕಳೆದ ವರ್ಷ ಸುರಿದ ಭಾರಿ ಮಳೆಗೆ ಇಲ್ಲಿನ ಕಾಲುದಾರಿ ಸೇತುವೆಯೊಂದು ಕೊಚ್ಚಿ ಹೋಗಿತ್ತು. ಇದರಿಂದ ಶಾಲೆಗೆ ತೆರಳಬೇಕಾಗಿದ್ದ ಮಕ್ಕಳು ಪರದಾಡುವಂತಾಗಬೇಕಾಗಿತ್ತು. ಈಗ ಈ ಸೇತುವೆಯನ್ನ ಮಕ್ಕಳೇ ನಿರ್ಮಿಸಿರುವುದರಿಂದ ಸರ್ಕಾರಕ್ಕ ಎದುರೇಟು ನೀಡಿದಂತಾಗಿದೆ. ಈ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ..

Cause way washed away in floods at kadapa  Children built a path for school in Andhra Pradesh  Andhra Pradesh school news  ಕಡಪದಲ್ಲಿ ಮಳೆಗೆ ಕೊಚ್ಚಿ ಹೋದ ಸೇತುವೆ  ಆಂಧ್ರಪ್ರದೇಶದಲ್ಲಿ ಶಾಲೆಗಾಗಿ ಸೇತುವೆ ನಿರ್ಮಿಸಿದ ಮಕ್ಕಳು  ಆಂಧ್ರಪ್ರದೇಶ ಶಾಲೆ ಸುದ್ದಿ
ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ಶಾಲೆಗಾಗಿ ನಿರ್ಮಿಸಿದ ಚಿಣ್ಣರು

ಕಡಪ :ಜಿಲ್ಲೆಯ ಬುಗ್ಗವಂಕ ಎಂಬಲ್ಲಿನ ಕಾಲುದಾರಿ ಎರಡು ತಿಂಗಳ ಹಿಂದೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಶಾಲೆಗೆ ತೆರಳುವ ಮಕ್ಕಳು ಪರದಾಡುವಂತಾಗಿತ್ತು. ಶಾಲೆಗೆ ಹೋಗಲು ಇಚ್ಛಿಸಿದ ಮಕ್ಕಳು ತಾವೇ ಹಣ ಜೋಡಿಸಿ ಸೇತುವೆ ನಿರ್ಮಿಸಿದ್ದಾರೆ.

ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ಶಾಲೆಗಾಗಿ ನಿರ್ಮಿಸಿದ ಚಿಣ್ಣರು..

ಮಕ್ಕಳು ತೆರಳುತ್ತಿದ್ದ ಕಿರಿದಾದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಹೀಗಾಗಿ, ಮಕ್ಕಳು ಶಾಲೆಗೆ ತೆರಳಲು ಪರದಾಡುವಂತಾಗಿತ್ತು. ಈ ಬಗ್ಗೆ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೂರು ನೀಡಿದ್ರೂ ಇದರ ಬಗ್ಗೆ ಕಾಳಜಿವಹಿಸಿಲ್ಲ.

ಓದಿ:ನಡುಗಡ್ಡೆ ಜಾತ್ರೆಗೆ ಕಟ್ಟುನಿಟ್ಟಿನ ಕಾನೂನು ; ವಿರಳ ಭಕ್ತರ ನಡುವೆ ನಡೆದ ನರಸಿಂಹ ದೇವರ ಜಾತ್ರೆ

ಇದರಿಂದ ಬೇಸತ್ತ ಮಕ್ಕಳು ತಮ್ಮ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸಿದರು. ಸೇತುವೆಯನ್ನು ತಾವೇ ನಿರ್ಮಿಸಲು ಯೋಚಿಸಿದರು. ಮಕ್ಕಳೆಲ್ಲ ಸೇರಿ ಹಣ ಸಂಗ್ರಹಿಸಿ ಕಾಲುದಾರಿ ನಿರ್ಮಿಸಿದರು. ಸುಮಾರು 3,000 ರೂ.ಗೆ ಕಡ್ಡಿಗಳನ್ನು ಖರೀದಿಸಿ ಶಾಲೆಗೆ ತೆರಳಲು ತಾತ್ಕಾಲಿಕ ಮಾರ್ಗ ಕಲ್ಪಿಸಿಕೊಂಡರು.

ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ಶಾಲೆಗಾಗಿ ನಿರ್ಮಿಸಿದ ಚಿಣ್ಣರು

ಈಗಾಲಾದ್ರೂ ಇತ್ತ ಸರ್ಕಾರ ಗಮನ ಹರಿಸಿ ಮಕ್ಕಳಿಗೆ ಶಾಶ್ವತ ದಾರಿ ಕಲ್ಪಿಸಿಕೊಡುತ್ತಾ ಎಂದು ಕಾದು ನೋಡ್ಬೇಕಾಗಿದೆ.

ABOUT THE AUTHOR

...view details