ಕರ್ನಾಟಕ

karnataka

ಆದಿವಾಸಿಗಳ ಕನಸು ನನಸು.. ಸಿಎಂ ಹೆಲಿಕಾಪ್ಟರ್​ನಲ್ಲಿ ಬುಡಕಟ್ಟು ಜನಾಂಗದ ನಾಲ್ವರು ಪ್ರಯಾಣ..

By

Published : Sep 15, 2021, 9:23 PM IST

ಸಿಎಂ ಈ ಕ್ಷೇತ್ರಕ್ಕೆ ರೋಡ್​ ಮೂಲಕ ಪ್ರಯಾಣ ಬೆಳೆಸಲು ನಿರ್ಧಾರ ಕೈಗೊಂಡಿದ್ದರಿಂದ ನಾಲ್ವರು ಆದಿವಾಸಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಲು ಅವಕಾಶ ನೀಡಲಾಗಿತ್ತು ಎಂದು ಸಿಎಂ ಕಚೇರಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ..

Air travel Dreams came True
Air travel Dreams came True

ಅಲಿರಾಜಪುರ​(ಮಧ್ಯಪ್ರದೇಶ):ಬುಡಕಟ್ಟು ಜನಾಂಗದ ನಾಲ್ವರ ಕನಸು ಕೊನೆಗೂ ನನಸಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​​ ಅಧಿಕೃತವಾಗಿ ಬಳಕೆ ಮಾಡುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಅರ್ಧಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ.

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಬೋಬತ್​​ ತಹಸಿಲ್​ನ ಬುಡಕಟ್ಟು ಕುಟುಂಬದ ನಾಲ್ವರು ಆದಿವಾಸಿಗಳಾದ ದರಿಯವ್​ ಸಿಂಗ್, ಮಂಗಲ್ ಸಿಂಗ್, ರಿಚ್ಚು ಸಿಂಗ್ ಬಘೇಲ್ ಮತ್ತು ಜೋಧ್ ಸಿಂಗ್​ ಸಿಎಂ ಬಳಕೆ ಮಾಡುತ್ತಿದ್ದ ಅಧಿಕೃತ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮಾಡಿದರು. ಇವರು ರಣಬೈಡಾದಿಂದ ಸೇಜವಾಡದವರೆಗೆ ಈ ಹೆಲಿಕಾಪ್ಟರ್​​ನಲ್ಲಿ ತೆರಳಿದ್ದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕ್ಷೇತ್ರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಚೌಹಾಣ್​, ರಸ್ತೆ ಮೂಲಕ ಪ್ರಯಾಣ ಬೆಳೆಸಿದರು. ಆದಿವಾಸಿ ಕ್ಷೇತ್ರ ಜೋಬತ್​​ನಲ್ಲಿ ಉಪಚುನಾವಣೆ ನಡೆಯಬೇಕಾಗಿದ್ದ ಕಾರಣ, ಸಿಎಂ ಈ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರು.

ಸಿಎಂ ಈ ಕ್ಷೇತ್ರಕ್ಕೆ ರೋಡ್​ ಮೂಲಕ ಪ್ರಯಾಣ ಬೆಳೆಸಲು ನಿರ್ಧಾರ ಕೈಗೊಂಡಿದ್ದರಿಂದ ನಾಲ್ವರು ಆದಿವಾಸಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಲು ಅವಕಾಶ ನೀಡಲಾಗಿತ್ತು ಎಂದು ಸಿಎಂ ಕಚೇರಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿರಿ:ಆಸೆ ಈಡೇರಿಸುವಂತೆ ಪೀಡಿಸಿ, ಯುವತಿ ಮೇಲೆ ವ್ಯಕ್ತಿಯಿಂದ ಹಲ್ಲೆ... ವಿಡಿಯೋ ವೈರಲ್​!

ಈ ಕ್ಷೇತ್ರಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡುತ್ತಿದ್ದಂತೆ ಇಲ್ಲಿನ ಆದಿವಾಸಿ ಜನರು ಅವರನ್ನ ವಿಶೇಷವಾಗಿ ಸ್ವಾಗತ ಮಾಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ಸಹ ನೀಡಿದರು.

ABOUT THE AUTHOR

...view details