ಕರ್ನಾಟಕ

karnataka

ETV Bharat / bharat

ಮದುವೆ ದಿನವೇ ಗಂಡನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಎರಡು ಮಕ್ಕಳ ತಾಯಿ! - ಮದುವೆಯ ದಿನವೇ ಈ ದಾರುಣ ಘಟನೆ

ಛತ್ತೀಸ್​ಗಢದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಮದುವೆಯ ದಿನವೇ ಪತಿಯನ್ನು ಪತ್ನಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಕೊರ್ಬಾದಲ್ಲಿ ನಡೆದಿದೆ.

woman hires contract killer to murder husband  contract killer to murder husband on anniversary  Chhattisgarh crime news  ಸುಪಾರಿ ಕೊಟ್ಟು ಕೊಲ್ಲಿಸಿದ ಎರಡು ಮಕ್ಕಳ ತಾಯಿ  ಮದುವೆ ದಿನವೇ ಗಂಡನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ  ಛತ್ತೀಸ್​ಗಢದಲ್ಲಿ ದಾರುಣ ಘಟನೆ  ಪತಿಯನ್ನು ಪತ್ನಿ ಸುಪಾರಿ ಕೊಟ್ಟು ಕೊಲೆ  ಅಮಾನವೀಯ ಘಟನೆಯೊಂದು ಮುನ್ನೆಲೆಗೆ  ಮದುವೆಯ ದಿನವೇ ಈ ದಾರುಣ ಘಟನೆ  ಪೊಲೀಸರ ಮುಂದೆ ಸುಳ್ಳು ಕಥೆ
ಮದುವೆ ದಿನವೇ ಗಂಡನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಎರಡು ಮಕ್ಕಳ ತಾಯಿ

By

Published : May 27, 2023, 10:06 AM IST

ಕೊರ್ಬಾ, ಛತ್ತೀಸ್‌ಗಢ:ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಸುಪಾರಿ ಕೊಟ್ಟು ಪತಿಯನ್ನು ಪತ್ನಿ ಕೊಲೆ ಮಾಡಿಸಿದ್ದಾರೆ. ಮದುವೆಯ ದಿನವೇ ಈ ದಾರುಣ ಘಟನೆ ನಡೆದಿದ್ದು, ಬಳಿಕ ಪೊಲೀಸರ ಮುಂದೆ ಸುಳ್ಳು ಕಥೆಗಳನ್ನು ಪತ್ನಿ ಹೆಣೆದಿದ್ದಾಳೆ. ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ರೂ ಸಹ ಆರೋಪಿಗಳು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಮೂಲ ಆರೋಪಿ ಪತಿಯನ್ನು ಕೊಂದಿದ್ದು ಏಕೆ? ಗಂಡನನ್ನು ಕೊಲ್ಲಲು ಕೊಟ್ಟ ಸುಪಾರಿ ಎಷ್ಟು? ಏನಿದು ಗಂಡ-ಹೆಂಡ್ತಿ ಮಿಸ್ಟರಿ?

ಕೋರ್ಬಾದ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಕಂಪನಿಯಲ್ಲಿ ಉದ್ಯೋಗಿ ಜಗಜೀವನ್ ರಾಮ್ ಕೆಲಸ ಮಾಡುತ್ತಿದ್ದನು. 2013ರಲ್ಲಿ ಧನೇಶ್ವರಿ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಜಗಜೀವನ್​ ರಾಮ್​ ಮತ್ತು ಧನೇಶ್ವರಿಗೆ ಇಬ್ಬರು ಮಕ್ಕಳಿದ್ದಾರೆ. ಜಗಜೀವನ್ ರಾಮ್ ಕುಡಿದು ಮನೆಗೆ ಬರುತ್ತಿದ್ದರಿಂದ ದಂಪತಿ ನಡುವೆ ಆಗಾಗ ಜಗಳ ಶುರುವಾಗುತ್ತಿತ್ತು. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಹೇಗಾದರೂ ಮಾಡಿ ಗಂಡನನ್ನು ದೂರ ಮಾಡಬೇಕೆಂದು ಧನೇಶ್ವರಿ ಪ್ಲಾನ್ ಮಾಡಿದರು. ಇದರ ಭಾಗವಾಗಿ ಆಕೆ ಮಾರ್ಚ್ 2023 ರಲ್ಲಿ ತುಷಾರ್ ಸೋನಿ ಅಲಿಯಾಸ್ ಗೋಪಿಯನ್ನು ಸಂಪರ್ಕಿಸಿದರು. ಗಂಡನನ್ನು ಕೊಲ್ಲಲು ಆತನೊಂದಿಗೆ ಧನೇಶ್ವರಿ ಒಪ್ಪಂದ ಮಾಡಿಕೊಂಡಳು. ಮುಂಗಡವಾಗಿ 50 ಸಾವಿರ ರೂಪಾಯಿ ನಗದು ಕೂಡ ನೀಡಿದ್ದಳು.

ಈ ಕ್ರಮದಲ್ಲಿ ಮೇ 23ರ ರಾತ್ರಿ ತುಷಾರ್ ಸೋನಿ ಜಗಜೀವನ್ ರಾಮ್ ಮನೆಗೆ ಹೋಗಿದ್ದರು. ಜಗಜೀವನ್ ರಾಮ್ ಬಾಗಿಲು ತೆರೆದಾಗ ಸೋನಿ ನೀರು ಕೇಳಿದರು. ತಕ್ಷಣ ಸೋನಿ ಜಗಜೀವನ್ ರಾಮ್ ಮೇಲೆ ತನ್ನೊಂದಿಗೆ ತಂದಿದ್ದ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದನು. ಪರಿಣಾಮ ಜಗಜೀವನ್ ರಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೊಲೆ ಮಾಡಿದ ಬಳಿಕ ಧನೇಶ್ವರಿ ತನ್ನ ಮೊಬೈಲ್ ಒಡೆದಿದ್ದಾರೆ. ಫೋನ್ ಅನ್ನು ಹೊರಗೆ ಎಸೆಯಲು ಧನೇಶ್ವರಿ ಸೋನಿಗೆ ಹೇಳಿದ್ದಾರೆ. ಮೇಲಾಗಿ ಕೊಲೆ ಆರೋಪಿಗೆ ಧನೇಶ್ವರಿ 6 ಸಾವಿರ ರೂಪಾಯಿ ನಗದು ಹಾಗೂ ಚಿನ್ನದ ನೆಕ್ಲೇಸ್ ನೀಡಿದ್ದಾಳೆ. ಬಳಿಕ ಆರೋಪಿ ಸೋನಿ ಅಲ್ಲಿಂದ ಪರಾರಿಯಾಗಿದ್ದಾನೆ.

ಧನೇಶ್ವರಿ ಅವರ ಸಹೋದರ ಶಿವಕಾಂತ್ ಅವರು ಮೇ 24 ರಂದು ಬೆಳಗ್ಗೆ ದುಷ್ಕರ್ಮಿಗಳಿಂದ ತನ್ನ ಸೋದರ ಮಾವನನ್ನು ಕೊಂದಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯಾರೋ ಪುಂಡರು ಬಂದು ತನ್ನ ಸೋದರ ಮಾವನವರನ್ನು ಕೊಂದು ಪರಾರಿಯಾಗಿದ್ದಾರೆ ಎಂದು ಸಹೋದರಿ ಧನೇಶ್ವರಿ ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು.

ಮೃತನ ಪತ್ನಿ ಧನೇಶ್ವರಿಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಮಧ್ಯರಾತ್ರಿಯಲ್ಲಿ ಕೆಲವು ಪುಂಡರು ಬಂದು ತನ್ನ ಪತಿಯನ್ನು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಬಳಿಕ ನಾನು ಗಾಬರಿಗೊಂಡು ಮನೆಯ ಮೂಲೆಯಲ್ಲಿ ಅವಿತುಕೊಂಡೆ. ಆರೋಪಿಗಳು ತನ್ನನ್ನೂ ಕೊಲ್ಲುತ್ತಾರೆ ಎಂಬ ಭಯದ ಕಾರಣ ನಾನು ಈ ರೀತಿ ಮಾಡಿದೆ ಎಂದು ಧನೇಶ್ವರಿ ಪೊಲೀಸರ ವಿಚಾರಣೆ ಹೇಳಿದ್ದರು.

ಆದರೆ, ಆಕೆಯ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದ್ದಾರೆ. ಇದರಿಂದ ಅಸಲಿ ಸಂಗತಿ ಬಯಲಾಗಿದೆ. ಪತಿ ಕುಡಿದ ಮತ್ತಿನಲ್ಲಿ ಜಗಳವಾಡುತ್ತಿದ್ದ ಎಂದು ಧನೇಶ್ವರಿ ಪೊಲೀಸರಿಗೆ ತಿಳಿಸಿದ್ದಾರೆ. ಇದರಿಂದ ಮನನೊಂದಿದ್ದ ನಾನು ಹೇಗಾದರೂ ಮಾಡಿ ಆತನನ್ನು ಸಾಯಿಸಲು ನಿರ್ಧರಿಸಿದೆ. ಹಾಗಾಗಿಯೇ ಸುಪಾರಿ ಕೊಟ್ಟು ಸೋನಿ ಜೊತೆ ಸೇರಿ ಹತ್ಯೆ ಮಾಡಿಸಿದ್ದೇನೆ ಎಂದು ಧನೇಶ್ವರಿ ವಿಚಾರಣೆ ವೇಳೆ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ಆರೋಪಿಗಳಾದ ಧನೇಶ್ವರಿ ಮತ್ತು ತುಷಾರ್ ಸೋನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರನ್ನೂ ರಿಮಾಂಡ್ ಮಾಡಲಾಗಿದೆ.

ಓದಿ:ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ

ABOUT THE AUTHOR

...view details