ಚೆನ್ನೈ (ತಮಿಳುನಾಡು): ಭಾರತದ ಚಂದ್ರಯಾನ 3 ಯೋಜನೆಯು ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳನ್ನು ಅನ್ವೇಷಿಸಲಿದೆ. ಇದರ ಫಲಿತಾಂಶಗಳು ಭಾರತಕ್ಕೆ ಬಹು ಹಂತದ ಪ್ರಯೋಜನವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:Chandrayana 3: ಚಂದ್ರಯಾನ 3 ತಂಡದಲ್ಲಿದ್ದ ಚಿಕ್ಕಮಗಳೂರಿನ ಡಾ.ನಂದಿನಿ
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಿಗದಿತ ಉಡಾವಣಾ ಸಮಯದ ಪ್ರಕಾರ, ಜಿಎಸ್ಎಲ್ವಿ ಮಾರ್ಕ್ 3 (ಎಲ್ವಿಎಂ 3) ಹೆವಿ ಲಿಫ್ಟ್ ಉಡಾವಣಾ ವಾಹನದಿಂದ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಇಸ್ರೋ ವಿಜ್ಞಾನಿಗಳು ಉಡಾವಣೆ ಮಾಡಿದ್ದಾರೆ. ಇಂದು ತಮಿಳುನಾಡಿನ ಚೆನ್ನೈನಲ್ಲಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್, ಚಂದ್ರಯಾನವು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವನ್ನು ಪ್ರಮುಖ ಜಾಗತಿಕ ಆಟಗಾರನನ್ನಾಗಿ ಮಾಡಲಿದೆ ಎಂದು ಹೇಳಿದರು.
ಚಂದ್ರಯಾನ ಸರಣಿಯು ಚಂದ್ರನ ಮೇಲೆ ನೀರಿನ ಅನ್ವೇಷಿಸುವ ಶ್ರೇಯಸ್ಸು ಪಡೆದಿದೆ. ನಾವು ನಮ್ಮ ಬಾಹ್ಯಾಕಾಶ ಪ್ರಯಾಣವನ್ನು ಇತರ ದೇಶಗಳಿಗಿಂತ ಬಹಳ ತಡವಾಗಿ ಪ್ರಾರಂಭಿಸಿದ್ದೇವೆ. ಆದರೂ, ನಮಗೆ ಮೊದಲು ಚಂದ್ರನ ಮೇಲೆ ಇಳಿದವರಿಗೆ ಆ ಸಂಶೋಧನೆಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಈಗ ಚಂದ್ರಯಾನ 3 ಭವಿಷ್ಯದಲ್ಲಿ ಬಹುಶಃ ಚಂದ್ರನ ಮೇಲೆ ಮಾನವ ಆವಾಸಸ್ಥಾನದ ಸಾಧ್ಯತೆ ಸೂಚಿಸುವ ಅಥವಾ ಸುಳಿವು ನೀಡುವ ಪ್ರಯೋಗಗಳ ಅನ್ವೇಷನೆಯನ್ನು ವಿಸ್ತರಿಸಲಿದೆ ಎಂದು ಮಾಹಿತಿ ನೀಡಿದರು.