ಕರ್ನಾಟಕ

karnataka

By

Published : Nov 12, 2020, 7:32 PM IST

ETV Bharat / bharat

ಮಧ್ಯ ಪ್ರದೇಶ ಚುನಾವಣೆ: ಬಂಡಾಯ ಮನೋಭಾವ ಹಾಗೂ ಪಕ್ಷಾಂತರಕ್ಕೆ ಒಪ್ಪಿಗೆ ನೀಡಿದ ಚಂಬಲ್ ಮತದಾರರು

ಜ್ಯೋತಿರಾಧಿತ್ಯ ಸಿಂಧಿಯಾಗೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿತ್ತು. ಬಿಜೆಪಿಗೆ ಬಹುಮತ ತಂದುಕೊಡುವುದರ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಜೊತೆಗೆ, ತಾನು ಕಾಂಗ್ರೆಸ್​ನಿಂದ ಬಿಜೆಪಿಗೆ ಸೇರಿರುವುದಕ್ಕೆ ಮತದಾರರ ಒಪ್ಪಿಗೆ ಕೂಡಾ ಪಡೆಯಬೇಕಿತ್ತು. ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದಾಗ, ಅವರೊಂದಿಗೆ 22 ಶಾಸಕರು ಬಂದಿದ್ದರು.

scindhia
scindhia

ನವದೆಹಲಿ: ಮಧ್ಯ ಪ್ರದೇಶ ಚುನಾವಣೆಯಲ್ಲಿ 19 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್ ಕೇವಲ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಅವರೊಂದಿಗೆ ಕೇಸರಿ ಪಾಳಯಕ್ಕೆ ಬಂದಿದ್ದ ಹಲವು ಶಾಸಕರು ಗೆಲುವಿನ ನಗೆ ಬೀರಿದ್ದಾರೆ.

ಜ್ಯೋತಿರಾಧಿತ್ಯ ಸಿಂಧಿಯಾಗೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿತ್ತು. ಬಿಜೆಪಿಗೆ ಬಹುಮತ ತಂದುಕೊಡುವುದರ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಜೊತೆಗೆ, ತಾನು ಕಾಂಗ್ರೆಸ್​ನಿಂದ ಬಿಜೆಪಿಗೆ ಸೇರಿರುವುದಕ್ಕೆ ಮತದಾರರ ಒಪ್ಪಿಗೆ ಕೂಡಾ ಪಡೆಯಬೇಕಿತ್ತು.

ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದಾಗ, ಅವರೊಂದಿಗೆ 22 ಶಾಸಕರು ಬಂದಿದ್ದರು. ಸಿಂಧಿಯಾ ಪರವಾಗಿರುವ 19 ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತರೆ, 13 ಅಭ್ಯರ್ಥಿಗಳು ಗೆದ್ದಿದ್ದಾರೆ. ಇದು ಅವರ ಸ್ಥಾನವನ್ನು ಬಲಪಡಿಸಿದೆ.

ಚಂಬಲ್ ಪ್ರಾಂತ್ಯದ ಬಹುಪಾಲು ಶಾಸಕರು ಪಕ್ಷಾಂತರ ಮಾಡಿದ್ದರು. ಚಂಬಲ್‌ನಲ್ಲಿ ಬಂಡಾಯ ಮನೋಭಾವವನ್ನು ಹುರಿದುಂಬಿಸಲಾಗುತ್ತಿದೆ ಎಂಬುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಚಂಬಲ್‌ನ 16 ಸ್ಥಾನಗಳಲ್ಲಿ ಉಪಚುನಾವಣೆ ನಡೆಯಿತು. ಈ ಪೈಕಿ ಕಾಂಗ್ರೆಸ್ 7 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್​ನಿಂದ ಬಂದು ಬಿಜೆಪಿಯಿಂದ ಸ್ಪರ್ಧಿಸಿರುವ 8 ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ABOUT THE AUTHOR

...view details