ಮೊಹಾಲಿ (ಪಂಜಾಬ್):ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಿದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೋಸ್ಟರ್ ಹಾಕಿದ್ದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪಂಜಾಬ್ ಸಿಎಂ ಹತ್ಯೆಗೆ 10 ಲಕ್ಷ ಘೋಷಿಸಿದ ಕಿಡಿಗೇಡಿಗಳಿಗೆ ಪೊಲೀಸರ ಶೋಧ - ಅಮರಿಂದರ್ ಸಿಂಗ್ ವಿರುದ್ಧ ಪೋಸ್ಟ್ರ್ ಬೆದರಿಕೆ
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಿದರೆ ಸೂಕ್ತ ಇನಾಮು ನೀಡಲಾಗುವುದು ಎಂದು ಗೋಡೆ ಮೇಲೆ ಪೋಸ್ಟರ್ ಹಾಕಿದ್ದ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
![ಪಂಜಾಬ್ ಸಿಎಂ ಹತ್ಯೆಗೆ 10 ಲಕ್ಷ ಘೋಷಿಸಿದ ಕಿಡಿಗೇಡಿಗಳಿಗೆ ಪೊಲೀಸರ ಶೋಧ Case lodged over 'death threat' to Punjab CM](https://etvbharatimages.akamaized.net/etvbharat/prod-images/768-512-10095968-989-10095968-1609595023363.jpg)
ಸಿಎಂ ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಿದರೆ 10 ಲಕ್ಷ ರೂ. ನೀಡಲಾಗುತ್ತದೆ ಎಂದು ಮೊಹಾಲಿಯ 66 ಮತ್ತು 67 ಬೀದಿಯಲ್ಲಿ ಅಪರಿಚಿತ ವ್ಯಕ್ತಿಗಳು ಪೋಸ್ಟರ್ ಅಂಟಿಸಿದ್ದಾರೆ. ಪೋಸ್ಟರ್ನಲ್ಲಿ ಬರೆಯಲಾದ ಇ-ಮೇಲ್ ಐಡಿ ಕೂಡ ಕಂಡುಬಂದಿದೆ. ಮೇಲ್ಕಂಡ ರಸ್ತೆಗಳಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಓದಿ :ತಾಂಡಾ ಅತ್ಯಾಚಾರ ಪ್ರಕರಣ : ಪಂಜಾಬ್ ಸಿಎಂ ರಾಜೀನಾಮೆಗೆ ಒತ್ತಾಯಿಸಿದ ಎಎಪಿ ಮಹಿಳಾ ಶಾಸಕರು
Last Updated : Jan 2, 2021, 7:28 PM IST