ಕರ್ನಾಟಕ

karnataka

ETV Bharat / bharat

ಮೃಗಾಲಯದಲ್ಲಿ ನೂತನ ಯೋಜನೆ: ಸಿಂಹದೊಂದಿಗೆ ಹುಟ್ಟುಹಬ್ಬ ಆಚರಿಸಲು ಅವಕಾಶ - ಕಾನ್ಪುರದ ಮೃಗಾಲಯದ ವಿಶೇಷತೆ

ಕಾನ್ಪುರದ ಪ್ರಾಣಿ ಉದ್ಯಾನದಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ನೀವು ನಿಮ್ಮ ಜನ್ಮದಿನವನ್ನು ಇಲ್ಲಿನ ಯಾವುದೇ ಪ್ರಾಣಿಯೊಂದಿಗೆ ಆಚರಿಸಬಹುದು. ಭಾನುವಾರದಿಂದ ಈ ನೂತನ ಯೋಜನೆಗೆ ಚಾಲ್ತಿ ದೊರೆತಿದ್ದು, ಮೊದಲ ದಿನ ಅಜಯ್ ಎಂಬ ಹೆಸರಿನ ಸಿಂಹದ ಜನ್ಮದಿನವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಯಿತು.

birthday
ಸಿಂಹದೊಂದಿಗೆ ಹುಟ್ಟುಹಬ್ಬ ಆಚರಿಸಲು ಅವಕಾಶ

By

Published : Mar 15, 2021, 6:43 AM IST

ಕಾನ್ಪುರ(ಉತ್ತರಪ್ರದೇಶ):ಕಾನ್ಪುರದ ಮೃಗಾಲಯದಲ್ಲಿ ಅಜಯ್​ ಎಂಬ ಸಿಂಹದ 13ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಯ್ತು. ಕೇಕ್​ ಕತ್ತರಿಸಿ, ಹಾಡಿ, ಕುಣಿದು ಎಲ್ಲರಿಗೂ ಸಿಹಿ ಹಂಚಿ ಈ ಲಯನ್​ ಹುಟ್ಟುಹಬ್ಬವನ್ನು ಸಾರ್ವಜನಿಕರು ಆಚರಣೆ ಮಾಡಿದ್ರು.

ಸಿಂಹದೊಂದಿಗೆ ಹುಟ್ಟುಹಬ್ಬ ಆಚರಿಸಲು ಅವಕಾಶ

ಕಾನ್ಪುರದ ಪ್ರಾಣಿ ಸಂಗ್ರಹಾಲಯದಲ್ಲಿ ಈ ರೀತಿ ಪ್ರಾಣಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಹೊಸ ಯೋಜನೆಯೊಂದನ್ನ ಜಾರಿಗೊಳಿಸಲಾಗಿದ್ದು, ಭಾನುವಾರದಂದು ಈ ಯೋಜನೆಗೆ ಚಾಲನೆ ನೀಡಲಾಯ್ತು.

ವನ್ಯಜೀವಿಗಳೊಂದಿಗೆ ಜನರ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ವನ್ಯಜೀವಿಗಳ ರಕ್ಷಣೆ ಹಾಗೂ ಅವುಗಳ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದು ಸಹ ಈ ಆಚರಣೆಯ ಮತ್ತೊಂದು ಉದ್ದೇಶ. ಇನ್ನು ಈ ರೀತಿ ಪ್ರಾಣಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳ ಬಯಸುವವರು ಆ ಪ್ರಾಣಿಯ ಒಂದು ವಾರದ ಆಹಾರದ ಖರ್ಚನ್ನು ನೋಡಿಕೊಳ್ಳುವುದು ಕಡ್ಡಾಯ.

13 ವರ್ಷದ ಬಬ್ಬರ್ ಶೇರ್ ಅಜಯ್ ಎಂಬ ಸಿಂಹದ ಹುಟ್ಟುಹಬ್ಬದ ಸ್ಮರಣೀಯ ಕ್ಷಣಕ್ಕೆ ಚಂದ್ರಶೇಖರ್ ಆಜಾದ್ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಕುಟುಂಬವು ಈ ಸಂಭ್ರಮಕ್ಕೆ ಸಾಕ್ಷಿಯಾಯಿತು. ಸಿಂಹದ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುವ ಮೂಲಕ ಜನರಿಗೆ ವನ್ಯಜೀವಿಗಳನ್ನು ಪ್ರೀತಿಸುವಂತೆ ಸಂದೇಶವನ್ನು ನೀಡಿದರು. ಪ್ರಾಣಿಶಾಸ್ತ್ರವನ್ನು ಹೆಚ್ಚಿನ ಜನರು ಅಧ್ಯಯನ ಮಾಡುವ ಮೂಲಕ ವನ್ಯಜೀವಿಗಳ ಬಗ್ಗೆ ಹೆಚ್ಚು ಸಂವೇದನಾಶೀಲರಾಗುವಂತೆ ಕರೆ ನೀಡಿದರು.

ABOUT THE AUTHOR

...view details