ಕರ್ನಾಟಕ

karnataka

ETV Bharat / bharat

ಗಂಗಾ ನದಿಯಲ್ಲಿ ತೇಲಿ ಬಂದ ಶವಗಳು: ಆಘಾತ ವ್ಯಕ್ತಪಡಿಸಿದ ಬಿಟೌನ್​ ಸೆಲೆಬ್ರಿಟಿಗಳು - ಜಾವೇದ್ ಜಾಫೆರಿ,

ಗಂಗಾ ನದಿಯಲ್ಲಿ ತೇಲುತ್ತಿರುವ ಶವಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ. ಸೋಮವಾರ, ಬಕ್ಸಾರ್ ಜಿಲ್ಲೆಯ ಗಂಗಾ ತೀರದಲ್ಲಿ ಕೊಳೆತ ಸುಮಾರು 45 ಮೃತ ದೇಹಗಳು ಪತ್ತೆಯಾಗಿದ್ದು, ಈ ಶವಗಳು ಉತ್ತರ ಪ್ರದೇಶದ ಘಾಜಿಪುರ, ವಾರಣಾಸಿ ಅಥವಾ ಪ್ರಯಾಗರಾಜ್‌ನ ಅಪ್‌ಸ್ಟ್ರೀಮ್ ಜಿಲ್ಲೆಗಳಿಂದ ತೇಲಿಬಂದಿವೆ.

B'wood on floating corpses:
ಆಘಾತ ವ್ಯಕ್ತಪಡಿಸಿದ ಬಿಟೌನ್​ ಸೆಲೆಬ್ರಿಟಿಗಳು

By

Published : May 12, 2021, 8:46 PM IST

ಮುಂಬೈ: ಕೋವಿಡ್ ಎರಡನೇ ಅಲೆ ನಡುವೆ ಗಂಗಾ ನದಿಯಲ್ಲಿ ಮೃತ ದೇಹಗಳು ತೇಲುತ್ತಿರುವುದಕ್ಕೆ ಬಿಟೌನ್​ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ.

ಆಘಾತ ವ್ಯಕ್ತಪಡಿಸಿದ ಬಿಟೌನ್​ ಸೆಲೆಬ್ರಿಟಿಗಳು

ನಟ-ನಿರ್ಮಾಪಕ ಫರ್ಹಾನ್ ಅಖ್ತರ್ ಟ್ವೀಟ್ ಮಾಡಿ "ನದಿಗಳಲ್ಲಿ ತೇಲುತ್ತಿರುವ ಮತ್ತು ದಡದಲ್ಲಿ ಕೊಳೆತ ಶವಗಳ ಸುದ್ದಿ ಹೃದಯ ವಿದ್ರಾವಕವಾಗಿದೆ. ವೈರಸ್​ ಅನ್ನು ಒಂದು ದಿನ ಸೋಲಿಸಲಾಗುವುದು. ಆದರೆ ವ್ಯವಸ್ಥೆಯಲ್ಲಿನ ಈ ವೈಫಲ್ಯಗಳಿಗೆ ಹೊಣೆಗಾರಿಕೆ ಇರಬೇಕು. ಅಲ್ಲಿಯವರೆಗೆ, ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗಲ್ಲ ಎಂದಿದ್ದಾರೆ.

ಆಘಾತ ವ್ಯಕ್ತಪಡಿಸಿದ ಬಿಟೌನ್​ ಸೆಲೆಬ್ರಿಟಿಗಳು

ನಟಿ-ನಿರ್ಮಾಪಕಿ ಪೂಜಾ ಭಟ್ ನೀವು ಮಿಠಾಯಿ ಮಾಡಬಹುದು. ಆದರೆ ನೀವು ಮೃತ ದೇಹಗಳನ್ನು ಹೇಗೆ ಮರೆಮಾಚುತ್ತೀರಿ. ಇದು ಮುಂದಿನ ತಲೆಮಾರುಗಳವರೆಗೆ ನಮ್ಮನ್ನು ಕಾಡುತ್ತದೆ ಎಂದು ಬರೆದುಕೊಂಡಿದ್ದಾರೆ. ಹಾಸ್ಯನಟ ಜಾವೇದ್ ಜಾಫೆರಿ ಇದು ದುರಂತ ಮತ್ತು ಭಯಾನಕ ಎಂದಿದ್ದಾರೆ.

ABOUT THE AUTHOR

...view details