ಕಾಶಿಪುರ (ಉತ್ತರಾಖಂಡ):ಪಂಜಾಬ್ ಗಾಯಕ ಸಿದು ಮೂಸೆವಾಲಾ ಕೊಲೆ ಮಾಡಿದ ಆರೋಪ ಹೊತ್ತಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಹೆಸರಿನಲ್ಲಿ ಗ್ಯಾಂಗೊಂದು ಉತ್ತರಾಖಂಡದ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿ 30 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದೆ. ಇದು ಅಲ್ಲಿನ ಉದ್ಯಮಿಗಳಿಗೆ ಆತಂಕ ಮೂಡಿಸಿದೆ.
ಉತ್ತರಾಖಂಡದ ಕಾಶಿಪುರದ ವಿವಿಧ ಬುಲಿಯನ್ ಉದ್ಯಮಿಗಳಿಗೆ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡಿ 30 ಲಕ್ಷ ನೀಡುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ ಸಾಯಲು ಸಿದ್ಧರಾಗಿರಿ ಎಂದು ಬೆದರಿಸಿದ್ದಾನೆ. ಇದನ್ನು ಉದ್ಯಮಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಫೋನ್ ಮಾಡಿದ ವ್ಯಕ್ತಿ ತಾನು ಪಂಜಾಬ್ನಿಂದ ಕರೆ ಮಾಡಿದ್ದಾಗಿ ಹೇಳಿರುವುದು ಕಾಲ್ ರೆಕಾರ್ಡ್ನಲ್ಲಿದೆ.
ಈ ಬಗ್ಗೆ ಉದ್ಯಮಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬುಲಿಯನ್ ಉದ್ಯಮಿಗಳಿಗೆ ಪೊಲೀಸ್ ಭದ್ರತೆ ಒದಗಿಸುವುದಾಗಿ ಅಧಿಕಾರಿಗಲೂ ಭರವಸೆ ನೀಡಿದ್ದಾರೆ. ಈ ಬಗ್ಗೆ ದೂರು ಪಡೆದ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಕರೆ ಬಂದ ಸ್ಥಳವನ್ನಾಧರಿಸಿ ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಎಸ್ಟಿಎಫ್ ಕೂಡ ತನಿಖೆಯಲ್ಲಿ ತೊಡಗಿದ್ದು, ನೆರೆಯ ರಾಜ್ಯಗಳ ಪೊಲೀಸರ ಸಹಾಯವನ್ನೂ ಪಡೆಯಲಾಗುತ್ತಿದೆ.