ಕರ್ನಾಟಕ

karnataka

ETV Bharat / bharat

ಮದುವೆ ಮುನ್ನಾ ದಿನ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಧು!

ಇಂದು ತೆಲಂಗಾಣದ ನಿಜಾಮಾಬಾದ್​​ ಜಿಲ್ಲೆಯ ವಧುವಿನ ಮನೆಯಲ್ಲಿ ಮದುವೆಗೆಂದು ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ ವಧು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

By

Published : Dec 11, 2022, 1:35 PM IST

bride-of-the-wedding-committed-suicide-by-hanging-herself
ಹಸಮಣೆ ಏರಬೇಕಿದ್ದ ವಧು ನೇಣು ಬಿಗಿದು ಆತ್ಮಹತ್ಯೆ...!

ನಿಜಾಮಾಬಾದ್​(ತೆಲಂಗಾಣ):ಅದು ಮದುವೆ ಮನೆ. ಬಂಧು ಮಿತ್ರರೆಲ್ಲಾ ಆಗಮಿಸಿದ್ದರು. ಮಗಳ ಮದುವೆಗೆಂದು ಪೋಷಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಲ್ಲಿ ವಿಧಿಯಾಟವೇ ಬೇರೆ ಇತ್ತು.

ಹಸೆಮಣೆ ಏರಬೇಕಿದ್ದ ವಧು ರೈಗಳ ರವಳಿ (25) ಎಂಬಾಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ತೆಲಂಗಾಣದ ನಿಜಾಮಾಬಾದ್​ನಲ್ಲಿ 12.15 ರ ಶುಭ ಮುಹೂರ್ತದಲ್ಲಿ ಮದುವೆ ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ ಯುವತಿ ಸಾವಿಗೆ ಶರಣಾಗಿದ್ದು ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

'ನನ್ನ ಮಗಳು ಸಂತೋಷ್ ಎಂಬಾತನನ್ನು ಮದುವೆಯಾಗಬೇಕಿತ್ತು. ಆತನೇ ನನ್ನ ಮಗಳಿಗೆ ಕಿರುಕುಳ ನೀಡಿದ್ದಾನೆ. ಅಲ್ಲದೇ ತಡರಾತ್ರಿ ಫೋನ್​ನಲ್ಲಿಯೂ ಮಾತನಾಡಿದ್ದಾನೆ. ಆ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಮದುವೆ ಮಂಟಪದಲ್ಲೇ ಕುಸಿದುಬಿದ್ದ ವಧು.. ಆಸ್ಪತ್ರೆಗೆ ಕರೆದೊಯ್ದರೂ ಬದುಕಲಿಲ್ಲ ಯುವತಿ

ABOUT THE AUTHOR

...view details