ಕರ್ನಾಟಕ

karnataka

ETV Bharat / bharat

ಯುವಕನಿಗೆ ಮನಸೋಇಚ್ಛೆ ಚಾಕು ಇರಿದು ಹತ್ಯೆ: ದೆಹಲಿಯಲ್ಲಿ ಮರುಕಳಿಸಿದ ದುಷ್ಕೃತ್ಯ - ಡಿಸಿಪಿ ಚಂದನ್ ಚೌಧರಿ

ಮೇ 29 ರಂದು ಸಾಹಿಲ್ ಖಾನ್ ಎಂಬಾತ ಸಾಕ್ಷಿ ಎಂಬ ಬಾಲಕಿಯನ್ನು ಅತ್ಯಂತ ಅಮಾನವೀಯವಾಗಿ ಕೊಂದು ಹಾಕಿದ ಪ್ರಕರಣದ ರೀತಿಯಲ್ಲೇ ಮತ್ತೊಂದು ಅಪರಾಧ​ ದೆಹಲಿಯಲ್ಲಿ ನಡೆದಿದೆ.

boy-stabbed-to-death-at-raju-park-area-of-neb-sarai-in-delhi
ಯುವಕನ ಮೇಲೆ ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ

By

Published : Jun 5, 2023, 10:19 PM IST

ದುಷ್ಕೃತ್ಯದ ಸಿಸಿಟಿವಿ ದೃಶ್ಯ

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಅಪರಾಧಗಳು ಹೆಚ್ಚುತ್ತಿವೆ. ದೆಹಲಿಯ ಶಹಬಾದ್‌ ಡೈರಿಯಲ್ಲಿ ಬಾಲಕಿಯ ಹತ್ಯೆಯ ಬಳಿಕ ಮತ್ತೊಂದು ಅದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಮೂವರು ಯುವಕರು ಗಲಾಟೆ ಮಾಡಿಕೊಳ್ಳುತ್ತಿರುವಾಗ ಒಬ್ಬ ಚಾಕುವಿನಿಂದ ತನಗಿಷ್ಟ ಬಂದಂತೆ ಎದುರಿನ ಯುವಕನಿಗೆ ಚುಚ್ಚಿದ್ದಾನೆ. ಈ ಘಟನೆ ಶಹಬಾದ್‌ ಡೈರಿಯ ರೀತಿಯಲ್ಲೇ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ. ಕಾರಣ ತಿಳಿದು ಬಂದಿಲ್ಲ.

ದೆಹಲಿಯಲ್ಲಿ ನಡೆಯುತ್ತಿರುವ ಈ ರೀತಿಯ ಪ್ರಕರಣಗಳು ಜನರಲ್ಲಿ ಅಸುರಕ್ಷತೆಯ ಭಾವ ಮೂಡಿಸಿದೆ. ಕಳೆದ ವರ್ಷ ಯುವತಿಯನ್ನು 35 ತುಂಡುಗಳನ್ನಾಗಿ ಕತ್ತರಿಸಿದ ಅಫ್ತಾಬ್​ ಘಟನೆ, ಈ ವರ್ಷದ ಮೊದಲ ದಿನವೇ ಕಾರಿನಡಿ ಸಿಲುಕಿದ್ದ ಯುವತಿಯನ್ನು 13 ಕಿ.ಮೀ ಎಳೆದೊಯ್ದ ಕಾಂಜಾವಾಲಾ ಪ್ರಕರಣ, ವಾರದ ಹಿಂದೆ ಯುವತಿಯ ಮೇಲೆ ಮನ ಬಂದಂತೆ ಚಾಕುವಿನಿಂದ ಚುಚ್ಚಿದ ಘಟನೆಗಳು ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದವು.

ಇದೆಲ್ಲದರ ನಡುವೆ ದೆಹಲಿ ಮತ್ತೆ ರಕ್ತ ಕಂಡಿದೆ. ಮೂವರು ಯುವಕರು ಗಲಾಟೆ ಮಾಡಿಕೊಂಡಿದ್ದು, ಒಬ್ಬ ಚಾಕುವಿನಿಂದ ಮನಸಿಚ್ಚೆ ಚುಚ್ಚುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದವನನ್ನು ರಾಜು ಪಾರ್ಕ್ ಪ್ರದೇಶದ ನಿವಾಸಿ ಸಚಿನ್ ಎಂದು ಗುರುತಿಸಲಾಗಿದೆ. ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ. ಆತನ ಪ್ರಾಣ ವೈದ್ಯಕೀಯ ಚಿಕಿತ್ಸೆ ಸಿಗುವ ಮೊದಲೇ ರಸ್ತೆ ಮಧ್ಯೆಯೇ ಹಾರಿಹೋಗಿತ್ತು. ತೀವ್ರ ರಕ್ತಸ್ರಾವದಿಂದ ಸಚಿನ್ ಮೃತಪಟ್ಟಿದ್ದ. ಆಸ್ಪತ್ರೆಗೆ ದೇಹ ತಲುಪಿದಾಗ ಆತ ಸಾವಿಗೀಡಾಗಿವುದನ್ನು ವೈದ್ಯರು ಖಾತರಿಪಡಿಸಿದ್ದರು. ಸಿಸಿಟಿವಿ ದೃಶ್ಯದ ಆಧಾರದಲ್ಲಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

"ಸಚಿನ್​ ಮೇಲೆ ದಾಳಿ ನಡೆದ ಸ್ಥಳದಲ್ಲಿ ಹಲವಾರು ಹುಡುಗರು ನಶೆಯಲ್ಲಿ ಓಡಾಡುತ್ತಿರುತ್ತಾರೆ. ಕೆಲ ಪುಡಿ ರೌಡಿಗಳು ಸಹ ಅಡ್ಡಾಡುತ್ತಿರುತ್ತಾರೆ. ಚಾಕು ಇರಿತ ನಡೆದ ರಸ್ತೆಯ ಕಡೆ ಪೊಲೀಸರು ಗಸ್ತು ಕೂಡಾ ತಿರುಗುವುದಿಲ್ಲ. ಇದರಿಂದ ಈ ರೀತಿಯ ಪುಂಡಾಟಿಕೆ ರಾಜಾರೋಷವಾಗಿ ನಡೆಯುತ್ತಿದೆ" ಎಂದು ಸ್ಥಳೀಯರು ಹೇಳಿದ್ದಾರೆ. ಮೃತ ವ್ಯಕ್ತಿ ರಾಜು ಪಾರ್ಕ್‌ನ ಸಿ ಬ್ಲಾಕ್‌ನ ನಿವಾಸಿ ಎಂದು ಡಿಸಿಪಿ ಚಂದನ್ ಚೌಧರಿ ತಿಳಿಸಿದರು. ನೆಬ್ ಸರೈ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆಯ ನಂತರ ಸ್ಥಳದಲ್ಲಿ ಗೊಂದಲ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ.

ಇತ್ತೀಚೆಗೆ, ಮೇ 29 ರಂದು ಇದೇ ರೀತಿಯ ಪ್ರಕರಣ ದೆಹಲಿಯಲ್ಲಿ ವರದಿಯಾಗಿತ್ತು. ಸಾಕ್ಷಿ ಎಂಬ ಬಾಲಕಿ ಕಿಡಿಗೇಡಿಯೊಬ್ಬ 21 ಬಾರಿ ಚಾಕುವಿನಿಂದ ಚುಚ್ಚಿ, ಕಲ್ಲಿನಿಂದ ಆಕೆ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆ ನಡೆದು ಸರಿಯಾಗಿ ಒಂದು ವಾರ ಕಳೆಯುತ್ತಿದ್ದಂತೆ ಮತ್ತದೇ ರೀತಿಯ ಘಟನೆ ಸಂಭವಿಸಿದೆ. ಮೇ 29 ಪ್ರಕರಣದ ಅಪರಾಧಿ ಸಾಹಿಲ್ ಖಾನ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ:Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ

ABOUT THE AUTHOR

...view details