ಪಾಲಕ್ಕಾಡ್ (ಕೇರಳ): ಜಾತಿ ತಾರತಮ್ಯ ನಮ್ಮಲ್ಲಿ ಇನ್ನು ಉಳಿದಿದೆ ಎನ್ನುವುದಕ್ಕೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಉತ್ತಮ ಸಾಕ್ಷಿಯಾಗಿದೆ.
ಪಾಲಕ್ಕಾಡ್ ಜಿಲ್ಲೆಯ ಅತ್ತಪ್ಪಾಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರು ಸಾವನ್ನಪ್ಪಿದ್ದರು. ಇವರ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿ ಶವವನ್ನು ಹೂಳಲೆಂದು ಅಲಮಾರ ಸಾರ್ವಜನಿಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಅಲ್ಲಿನ ಸ್ಥಳೀಯ ಗುಂಪು ಇಲ್ಲಿ ಶವವನ್ನು ಹೂಳದಂತೆ ತಡೆದು ಸ್ಮಶಾನಕ್ಕೆ ಬೀಗ ಹಾಕಿ ವಿಕೃತಿ ಮೆರೆದಿದೆ.