ನವದೆಹಲಿ:22 ರೋಗಿಗಳು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಆರೋಪಕ್ಕೆ ಸಂಬಂಧಿಸಿದಂತೆ ಆಗ್ರಾ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿರುವುದರ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರ ಪ್ರದೇಶದ ಬಿಜೆಪಿ ಸರ್ಕಾರ "ವಿಚಾರಣೆಯ ಅಣಕು ಡ್ರಿಲ್" ನಡೆಸಿದೆ ಎಂದು ಕುಟುಕಿದ್ದಾರೆ.
ಆಸ್ಪತ್ರೆಯು ಆಕ್ಸಿಜನ್ ಸರಬರಾಜಿನ ಅಣಕು ಡ್ರಿಲ್ ನಡೆಸುವ ವೇಳೆಗೆ ಆಕ್ಸಿಜನ್ ಕಡಿತಗೊಳಿಸಿದ ಪರಿಣಾಮ 22 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿಲಾಗಿದೆ. ಆದರೆ ಇದಕ್ಕೆ ಯಾವುದೇ ಪುರಾವೆ ಲಭ್ಯವಿಲ್ಲ.