ಕರ್ನಾಟಕ

karnataka

'ಬೆಂಕಿ ಪೊಟ್ಟಣ' ಕೊಡಲಿಲ್ಲವೆಂದು ವ್ಯಕ್ತಿಯನ್ನ ಹೊಡೆದು ಕೊಂದ ದುಷ್ಕರ್ಮಿಗಳು!

ಬೆಂಕಿ ಪೊಟ್ಟಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ನವದೆಹಲಿಯ ತೈಮೂರ್​​ ನಗರದಲ್ಲಿ ನಡೆದಿದೆ.

By

Published : Mar 9, 2022, 10:56 AM IST

Published : Mar 9, 2022, 10:56 AM IST

Bihar man beaten to death
Bihar man beaten to death

ನವದೆಹಲಿ:ಬೆಂಕಿ ಪೊಟ್ಟಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಸೋಮವಾರ ರಾತ್ರಿ ದೆಹಲಿಯ ತೈಮೂರ್ ನಗರದಲ್ಲಿರುವ ತನ್ನ ಸಹೋದರನ ಭೇಟಿ ಮಾಡಲು ಬಿಹಾರದ ದೇವನ್​ ತೆರಳುತ್ತಿದ್ದನು. ಈ ವೇಳೆ ಮದ್ಯದ ಅಮಲಿನಲ್ಲಿದ್ದ 3-4 ಜನರು ಆತನ ಬಳಿ ಬೆಂಕಿ ಪೊಟ್ಟಣ ಕೇಳಿದ್ದಾರೆ. ಈ ವೇಳೆ ಅವರಿಗೆ ಬೆಂಕಿ ಪೊಟ್ಟಣ ನೀಡಲು ನಿರಾಕರಿಸಿದ್ದು, ಇದರಿಂದ ಆಕ್ರೋಶಗೊಂಡು ಆತನ ಮೇಲೆ ದಾಳಿ ನಡೆಸಿದ್ದಾರೆ. ತಕ್ಷಣವೇ ಆತನನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿರಿ:ರಷ್ಯಾ ದಾಳಿಗೆ ಮೂರು ಮಕ್ಕಳು ಸೇರಿ 7 ಮಂದಿ ಸಾವು: ಮಾರ್ಷಲ್​ ಆರ್ಟ್ಸ್​ ಚಾಂಪಿಯನ್ ಕೂಡ ಬಲಿ

ಮೃತನನ್ನ ಬಿಹಾರದ ದೇವನ್ ರಿಷಿ(35) ಎಂದು ಗುರುತಿಸಲಾಗಿದ್ದು, ಪತ್ನಿ ರೂಪಾ ದೇವಿ ನಾಲ್ವರು ಮಕ್ಕಳೊಂದಿಗೆ ಜಸೋಲಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ಕೂಡ ಇಂತಹ ಅನೇಕ ಅಪರಾಧ ಪ್ರಕರಣ ಈ ಪ್ರದೇಶದಲ್ಲಿ ನಡೆದಿದ್ದು, ಇದರ ಬಗ್ಗೆ ದೂರು ನೀಡಲಾಗಿದೆ. ಇತ್ತೀಚೆಗಷ್ಟೇ ರೂಪೇಶ್​ ಎಂಬಾತನನ್ನು ಮಕ್ಕಳ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ABOUT THE AUTHOR

...view details