ಕರ್ನಾಟಕ

karnataka

ETV Bharat / bharat

ವೃದ್ಧನಿಗೆ ತಮ್ಮ ಪಾಲಿನ ಅನ್ನ ಹಂಚಿದ ಪೊಲೀಸರು: ಆರಕ್ಷಕರಿಗೆ ಸಲಾಂ ಹೇಳಿದ ಯುವಿ - ವಿಡಿಯೋ ಶೇರ್​ ಮಾಡಿ ಆರಕ್ಷಕರಿಗೆ ಸಲಾಂ ಹೇಳಿದ ಯುವಿ

ಇನ್ಸ್ಟಾಗ್ರಾಂನಲ್ಲಿ ಯುವರಾಜ್​ಸಿಂಗ್​ ಶೇರ್​ ಮಾಡಿರುವ ಈ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದೆ. ಆನ್​ ಡ್ಯೂಟಿ ಪೊಲೀಸರು, ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ವಿಚಾರಿಸಿದ್ದಾರೆ. ಆತನನ್ನು ನೋಡಿ ಮರುಗಿದ ಪೊಲೀಸರು, ಹಸಿದಾತನಿಗೆ ತಮ್ಮ ಪಾಲಿನ ಊಟ ಕೊಟ್ಟು ವ್ಯಕ್ತಿಯ ಹಸಿವು ತಣಿಸಿದ್ದಾರೆ. ತಮ್ಮ ಒತ್ತಡದ ಕೆಲಸದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.

Yuvaraj Singh shares video
ವಿಡಿಯೋ ಶೇರ್​ ಮಾಡಿ ಆರಕ್ಷಕರಿಗೆ ಸಲಾಂ ಹೇಳಿದ ಯುವಿ

By

Published : Apr 5, 2020, 2:50 PM IST

ಹೈದರಾಬಾದ್​: ಎಲ್ಲಕ್ಕಿಂತ ಮಾನವೀಯತೆ ದೊಡ್ಡದು. ಕೊರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ದೇಶದಲ್ಲಿ ಈಗ ತುಂಬಾ ಕ್ಲಿಷ್ಟಕರ ಸನ್ನಿವೇಶ ನಿರ್ಮಾಣವಾಗಿದೆ. ಈ ನಡುವೆಯೂ ಈ ಪೊಲೀಸರು ಮಾಡಿದ ಮಾನವೀಯ ಕಾರ್ಯಕ್ಕೆ ಸಲಾಂ ಹೇಳಲೇ ಬೇಕು.

ಇನ್ಸ್ಟಾಗ್ರಾಂನಲ್ಲಿ ಯುವರಾಜ್​ಸಿಂಗ್​ ಶೇರ್​ ಮಾಡಿರುವ ಈ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದೆ. ಆನ್​ ಡ್ಯೂಟಿ ಪೊಲೀಸರು, ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ವಿಚಾರಿಸಿದ್ದಾರೆ. ಆತನನ್ನು ನೋಡಿ ಮರುಗಿದ ಪೊಲೀಸರು, ಹಸಿದಾತನಿಗೆ ತಮ್ಮ ಪಾಲಿನ ಊಟ ಕೊಟ್ಟು ವ್ಯಕ್ತಿಯ ಹಸಿವು ತಣಿಸಿದ್ದಾರೆ. ತಮ್ಮ ಒತ್ತಡದ ಕೆಲಸದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.

ಈ ವಿಡಿಯೋವನ್ನು ಶೇರ್​ ಮಾಡಿರುವ ಭಾರತ ಕ್ರಿಕೆಟ್​ ತಂಡದ ಆಲ್​ರೌಂಡರ್​ ಯುವರಾಜ್​ ಸಿಂಗ್​, ಈ ಪೊಲೀಸರು ತೋರಿರುವ ಮಾನವೀಯ ಕಾರ್ಯ ಮನಮುಟ್ಟುವಂತಿದೆ. ಇಂತಹ ಕಠಿಣ ಸನ್ನಿವೇಶದಲ್ಲೂ ತಮ್ಮ ಪಾಲಿನ ಅನ್ನವನ್ನು ಹಂಚಿದ ಅವರ ಉದಾರತನಕ್ಕೆ ನಮ್ಮ ಗೌರವ ಸಲ್ಲಬೇಕು ಎಂದು ಅಡಿಬರಹ ಹಾಕಿ ಪೋಸ್ಟ್​ ಮಾಡಿದ್ದಾರೆ.

For All Latest Updates

ABOUT THE AUTHOR

...view details