ದಿಯೋಘರ್ (ಜಾರ್ಖಂಡ್): ಇಂದು ಸಾವನ್ನ ಮೊದಲ ಸೋಮವಾರ. ಈ ಬಾರಿ, ಶ್ರಾವಣ ತಿಂಗಳಲ್ಲಿ ಐದು ಸೋಮವಾರಗಳಿರುವುದರಿಂದ ಇದನ್ನು ಶುಭ ಸಂಕೇತ ಎಂದು ಪರಿಗಣಿಸಲಾಗಿದೆ. ಪವಿತ್ರ ತಿಂಗಳು ಸೋಮವಾರದಿಂದಲೇ ಪ್ರಾರಂಭವಾಗುತ್ತಿದೆ.
ತಜ್ಞರ ಪ್ರಕಾರ, ಸೋಮವಾರ ಚಂದ್ರನ ದಿನ ಮತ್ತು ಚಂದ್ರನು ಶಿವನಿಗೆ ತುಂಬಾ ಪ್ರಿಯ. ಆದ್ದರಿಂದ, ಶ್ರಾವಣ ತಿಂಗಳಲ್ಲಿ ಸೋಮವಾರದ ಪೂಜೆ ವಿಶೇಷ ಪ್ರಾಮುಖ್ಯತೆ ಹೊಂದಿದೆ ಎಂದು ಪರಿಗಣಿಸಲಾಗಿದೆ.
ಕೊರೊನಾ ಹಿನ್ನೆಲೆ ಈ ಬಾರಿ ದೇವಾಲಯಗಳು ಮುಚ್ಚಿರುವುದರಿಂದ ಭಕ್ತರಿಗೆ ಪವಿತ್ರ ದ್ವಾದಶ ಜ್ಯೋತಿರ್ಲಿಂಗದ ಜಲಾಭಿಷೇಕ ಮಾಡಲು ಅವಕಾಶ ಸಿಗುವುದಿಲ್ಲ. ಈ ಬಾರಿ ಜನರು ಆನ್ಲೈನ್ನಲ್ಲಿ ದೇವರ ದರ್ಶನ ಪಡೆಯುತ್ತಿದ್ದಾರೆ.