ಕರ್ನಾಟಕ

karnataka

ETV Bharat / bharat

ಕರ್ತವ್ಯಕ್ಕೆ ಮರಳಿದ ವೈಮಾನಿಕ ಸಿಬ್ಬಂದಿ: ಉಕ್ಕಿನ ಹಕ್ಕಿಯೊಳಗಿನ ಕೆಲಸಗಾರರಲ್ಲಿ ಉಕ್ಕಿದ ಕರ್ತವ್ಯ ಪ್ರಜ್ಞೆ - ಕೊರೊನಾ ಸೋಂಕು

ನಾವು ಸ್ವಲ್ಪ ಚಿಂತಿತರಾಗಿದ್ದೇವೆ. ಆದರೆ, ಕೆಲಸವೇ ನಮಗೆ ಮುಖ್ಯ. ನಾವು ವಿಮಾನಯಾನ ಸಂಸ್ಥೆ ನೀಡಿರುವ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳನ್ನು ಬಳಸುತ್ತೇವೆ ಎಂದು ಫ್ಲೈಟ್ ಅಟೆಂಡೆಂಟ್ ಅಮಂದೀಪ್ ಕೌರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

'Work comes first': Flight attendants back duty as domestic air services resume
ಕರ್ತವ್ಯಕ್ಕೆ ಮರಳಿದ ಫ್ಲೈಟ್ ಅಟೆಂಡೆಂಟ್​ಗಳು

By

Published : May 25, 2020, 11:23 AM IST

Updated : May 25, 2020, 11:50 AM IST

ನವದೆಹಲಿ: ಇಂದಿನಿಂದ ಪ್ರಾದೇಶಿಕ ವಿಮಾನ ಸಂಚಾರ ಆರಂಭವಾಗಿದ್ದು, ವೈಮಾನಿಕ ಸಿಬ್ಬಂದಿ ಕೆಲಸಕ್ಕೆ ಮರಳಿದ್ದಾರೆ.

ದೆಹಲಿಯಲ್ಲಿ ಇಂದು ಮುಂಜಾನೆ ವಿಮಾನ ಪರಿಚಾರಕರು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ನಾವು ಸ್ವಲ್ಪ ಚಿಂತಿತರಾಗಿದ್ದೇವೆ. ಆದರೆ, ಕೆಲಸವೇ ನಮಗೆ ಮುಖ್ಯ. ನಾವು ವಿಮಾನಯಾನ ಸಂಸ್ಥೆ ನೀಡಿರುವ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳನ್ನು ಬಳಸುತ್ತೇವೆ ಎಂದು ಫ್ಲೈಟ್ ಅಟೆಂಡೆಂಟ್ ಅಮಂದೀಪ್ ಕೌರ್ ಈ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಪ್ರಯಾಣಿಕರೊಂದಿಗೆ ಈಗ ಕಡಿಮೆ ಸಂವಹನ ನಡೆಸಬೇಕಾಗಿದೆ ಎಂದು ಮತ್ತೊಬ್ಬ ಫ್ಲೈಟ್ ಅಟೆಂಡೆಂಟ್ ಹೇಳಿದರು. ದೇಶೀಯ ವಿಮಾನ ಸೇವೆಗಳು ಪುನರಾರಂಭ ವಾಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಆಹಾರ ಮತ್ತು ಪಾನೀಯ, ಚಿಲ್ಲರೆ ಮಾರಾಟ ಮಳಿಗೆಗಳನ್ನು ಕೂಡ ತೆರೆಯಲಾಗಿದೆ.

Last Updated : May 25, 2020, 11:50 AM IST

ABOUT THE AUTHOR

...view details