ಮಿರ್ಜಾಪುರ(ಯುಪಿ):ಸೋನಭದ್ರಾ ಗುಂಡಿನ ದಾಳಿ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರನ್ನು ಭೇಟಿ ಮಾಡಲು ಹೊರಟಿದ್ದ ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಒಟ್ಟಾರೆ ವಿಚಾರದ ಬಗ್ಗೆ ಸ್ವತಃ ಪ್ರಿಯಾಂಕ ಗಾಂಧಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಸೋನಭದ್ರಾ ಪ್ರಕರಣ... ಮೃತರ ಕುಟುಂಬ ಭೇಟಿಗೆ ಹೊರಟಿದ್ದ ಪ್ರಿಯಾಂಕಾ ವಶಕ್ಕೆ
ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದೇ ಹಿಂತಿರುಗುವ ಪ್ರಶ್ನೆಯೇ ಇಲ್ಲ ಎಂದಿರುವ ಪ್ರಿಯಾಂಕ, ವಾರಣಾಸಿಗೆ ತೆರಳುವಂತೆ ಮಿರ್ಜಾಪುರದ ಎಸ್ಪಿ ಮಾಡಿರುವ ಮನವಿಯನ್ನೂ ತಿರಸ್ಕರಿಸಿದ್ದಾರೆ.
ಮಿರ್ಜಾಪುರದಲ್ಲಿ ಯಾವುದೇ ಹವಾನಿಯಂತ್ರಿತ ಸ್ಥಳಗಳಿಲ್ಲ ಎಂದಿರುವ ಮಿರ್ಜಾಪುರದ ಎಸ್ಪಿಗೆ, ನನಗೆ ಯಾವುದೇ ಎಸಿ ಅಥವಾ ವಿದ್ಯುತ್ ಅವಶ್ಯಕತೆ ಇಲ್ಲ ಎಂದು ಪ್ರಿಯಾಂಕ ಖಡಕ್ಕಾಗಿ ಹೇಳಿದ್ದಾರೆ.