ಕರ್ನಾಟಕ

karnataka

ETV Bharat / bharat

ಜ್ಯೋತಿಷಿಯ ಕೊಳೆತ ಮೃತ ದೇಹದೊಂದಿಗೆ ಮಹಿಳೆ ವಾಸ : ಕಾರಣ ನಿಗೂಢ.. - ತಮಿಳುನಾಡಿನ ಅಪರಾಧ ಸುದ್ದಿ

ಕೆಲವು ದಿನಗಳ ನಂತರ ಮೃತದೇಹ ವಾಸನೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಬಲವಂತವಾಗಿ ಮನೆಯೊಳಗೆ ಹೋಗಿ ನೋಡಿದಾಗ ಚಾಕುವಿನಿಂದ ಹಲ್ಲೆ ಮಾಡಲು ಮಹಿಳೆ ಯತ್ನಿಸಿದ್ದಾಳೆ. ಈ ವೇಳೆ ವಿಷಯ ತಿಳಿದ ಗ್ರಾಮ ಆಡಳಿತ ಅಧಿಕಾರಿ ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..

Woman keeps fortune teller's corpse without cremating
ಜ್ಯೋತಿಷಿಯ ಕೊಳೆತ ಮೃತ ದೇಹದೊಂದಿಗೆ ಮಹಿಳೆ ವಾಸ

By

Published : Nov 22, 2020, 10:48 PM IST

ಚೆಂಗಲ್​ಪಟ್ಟು (ತಮಿಳುನಾಡು) :ಮಹಿಳೆಯೋರ್ವಳು ಜ್ಯೋತಿಷಿಯ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವನ್ನು ನಾಲ್ಕು ದಿನಗಳು ಮನೆಯಲ್ಲಿಟ್ಟುಕೊಂಡಿದ್ದ ಘಟನೆ ತಮಿಳುನಾಡಿನ ಚೆಂಗಲ್​ಪಟ್ಟು ಜಿಲ್ಲೆಯಲ್ಲಿ ನಡೆದಿದೆ.

ಮೃತ ದಾಮೋದರನ್​​ (62) ಎಂಬಾತ ಚೆಂಗಲ್​ಪಟ್ಟು ಜಿಲ್ಲೆಯ ಪೆರಿಯಾಪುದೂರ್ ಗ್ರಾಮದವನಾಗಿದ್ದು, ತನ್ನ ಪತ್ನಿ ಶಾರದಾ ಮೃತಪಟ್ಟ ನಂತರ ತನ್ನ ಸಹಾಯಕಿ ರಾಜೇಶ್ವರಿ ಎಂಬುವಳೊಂದಿಗೆ ಸುಮಾರು 6 ವರ್ಷಗಳಿಂದ ವಾಸವಿದ್ದನು.

ಜ್ಯೋತಿಷಿಯ ಕೊಳೆತ ಮೃತ ದೇಹದೊಂದಿಗೆ ಮಹಿಳೆ ವಾಸ

ನಾಲ್ಕು ದಿನಗಳ ಹಿಂದೆ ದಾಮೋದರನ್​ ಮೃತಪಟ್ಟಿದ್ದು, ಆತನ ಸಹಾಯಕಿ ಆ ವಿಷಯವನ್ನು ಮುಚ್ಚಿಟ್ಟಿದ್ದಳು. ಮನೆಯಲ್ಲಿಯೇ ಇದ್ದ ಆಕೆ ಮನೆಯಿಂದ ಹೊರಗೆ ಕಾಲಿಡದೇ ಆಹಾರವನ್ನು ತನ್ನ ಮಕ್ಕಳಿಂದ ತರಿಸಿಕೊಳ್ಳುತ್ತಿದ್ದಳು. ನೆರೆಹೊರೆಯವರು ದಾಮೋದರನ್ ಬಗ್ಗೆ ವಿಚಾರಿಸಿದಾಗ ಆತನು ಬೇರೆಡೆ ಹೋಗಿದ್ದಾನೆಂದು ನೆಪ ಹೇಳುತ್ತಿದ್ದಳು.

ಕೆಲವು ದಿನಗಳ ನಂತರ ಮೃತದೇಹ ವಾಸನೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಬಲವಂತವಾಗಿ ಮನೆಯೊಳಗೆ ಹೋಗಿ ನೋಡಿದಾಗ ಚಾಕುವಿನಿಂದ ಹಲ್ಲೆ ಮಾಡಲು ರಾಜೇಶ್ವರಿ ಯತ್ನಿಸಿದ್ದಾಳೆ. ಈ ವೇಳೆ ವಿಷಯ ತಿಳಿದ ಗ್ರಾಮ ಆಡಳಿತ ಅಧಿಕಾರಿ ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಚೆಂಗಲ್​ಪಟ್ಟು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ರವಾನಿಸಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ABOUT THE AUTHOR

...view details