ಕರ್ನಾಟಕ

karnataka

ಯುವತಿ ಸಜೀವ ದಹನ... ನಿತೀಶ್​ ವಿರುದ್ಧ ರಾಹುಲ್ ಗರಂ:  ಚುನಾವಣಾ ಲಾಭಕ್ಕಾಗಿ ಸತ್ಯ ಮುಚ್ಚಿಟ್ಟ ಆರೋಪ

By

Published : Nov 17, 2020, 12:21 PM IST

ಬಿಹಾರದಲ್ಲಿ ನಡೆದ ಯುವತಿಯ ಜೀವಂತ ದಹನ ಘಟನೆ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿತೀಶ್​ ಕುಮಾರ್ ಹಾಗೂ ಎನ್​ಡಿಎ ವಿರುದ್ಧ ಗುಡುಗಿದ್ದಾರೆ. ಚುನಾವಣಾ ಲಾಭಕ್ಕಾಗಿ ಸತ್ಯ ಮರೆ ಮಾಚಿದ್ದಾರೆ ಎಂದು ಆರೋಪಿಸಿದ್ದಾರೆ.

Congress leader Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ಬಿಹಾರದಲ್ಲಿ 20 ವರ್ಷದ ಯುವತಿಯನ್ನು ಸಜೀವ ದಹನ ಮಾಡಿದ ಘಟನೆ ಕುರಿತಂತೆ ಎನ್​ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಬಿಹಾರ ಚುನಾವಣೆ ಹಿನ್ನೆಲೆ ಘಟನೆಯನ್ನು ಮುಚ್ಚಿಟ್ಟು ಚುನಾವಣಾ ಲಾಭಕ್ಕೆ ಬಳಸಿಕೊಂಡರು ಎಂದು ಆರೋಪಿಸಿದ್ದಾರೆ.

ಈ ಕುರಿತಂತ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವೈಶಾಲಿಯಲ್ಲಿ ಯುವತಿ ಜೀವಂತವಾಗಿ ಸುಟ್ಟುಹಾಕಿದ ಘಟನೆಯನ್ನು ಚುನಾವಣೆಯ ಹಿನ್ನೆಲೆ ಮುಚ್ಚಿಡಲಾಗಿತ್ತು. ಆಕೆ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.

ಟ್ವೀಟ್​​ನಲ್ಲಿ ಮುಂದುವರಿದು, ಯಾರ ಅಪರಾಧವು ಹೆಚ್ಚು ಅಪಾಯಕಾರಿ..? ಈ ಕೃತ್ಯ ಎಸಗಿದವರ ಅಥವಾ ಚುನಾವಣಾ ಲಾಭ ಪಡೆಯಲು ಈ ಕೃತ್ಯ ಅಡಗಿಸಿಟ್ಟವರು ತಮ್ಮ ಉತ್ತಮ ಆಡಳಿತ ಎಂಬ ಸುಳ್ಳಿಗೆ ಅಡಿಪಾಯ ಹಾಕಿ ಅದನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ರಾಹುಲ್ ದೂರಿದ್ದಾರೆ.

ಅಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ ಯುವತಿಯನ್ನು ವ್ಯಕ್ತಿಯೊಬ್ಬ ಕಿರುಕುಳ ನೀಡಿ, ಆತನ ಸ್ನೇಹಿತರ ಜೊತೆಗೂಡಿ ಜೀವಂತವಾಗಿ ಸುಟ್ಟುಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯ ಬಳಿಕ ನವೆಂಬರ್ 15ರಂದು ನ್ಯಾಯ ಒದಗಿಸುವಂತೆ ಹಾಗೂ ಈ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಯುವತಿಯ ಕುಟುಂಬಸ್ಥರು ಪಾಟ್ನಾದ ಕಾರ್ಗಿಲ್ ಚೌಕ್‌ನಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರ ಆಶ್ವಾಸನೆಯ ಮೇರೆಗೆ ಅಂತ್ಯ ಸಂಸ್ಕಾರ ನಡೆಸಿದ್ದರು.

ABOUT THE AUTHOR

...view details