ಕರ್ನಾಟಕ

karnataka

By

Published : Nov 21, 2019, 12:55 AM IST

ETV Bharat / bharat

ಸಿಯಾಚಿನ್‌ನಲ್ಲಿ ಸೈನಿಕರು ಎಷ್ಟು ಸುರಕ್ಷಿತ?

ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್​​ನಲ್ಲಿ ಕಳೆದ ಅನೇಕ ವರ್ಷಗಳಿಂದ ಭಾರತ-ಪಾಕಿಸ್ತಾನದ ಯೋಧರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಆ ಕುರಿತು ಇಲ್ಲೊಂದು ಸ್ಟೋರಿ.

ಯುದ್ಧ ಭೂಮಿ ಸಿಯಾಚಿನ್​

ಧ್ರುವ ಪ್ರದೇಶದ ನಂತರ ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಎನಿಸಿರುವ ಸಿಯಾಚಿನ್, ವಿಶ್ವದ ಅತ್ಯುನ್ನತ ಯುದ್ಧಭೂಮಿಯೆಂಬ ಹೆಗ್ಗಳಿಕೆ ಹೊಂದಿದೆ. ಆದಾಗ್ಯೂ ಇಲ್ಲಿನ ಪ್ರಾಕೃತಿಕ ವಾತಾವರಣ ಮಾತ್ರ ಎಂದಿಗೂ ಗಡಿಕಾಯುವ ಸೈನಿಕರ ಪಾಲಿಗೆ ಉತ್ತಮವಾಗಿಲ್ಲ. ಭಾರತದ ಗಡಿಭಾಗವಾಗಿರುವ ಇಲ್ಲಿನ ನೀರ್ಗಲ್ಲು ಪ್ರದೇಶದಲ್ಲೊಂದು ಸೇನಾ ಠಾಣೆಯಿದೆ. ಈ ಪ್ರದೇಶದಲ್ಲಿ ವಾಸ್ತವಿಕವಾಗಿ ಆಮ್ಲಜನಕದ ಲಭ್ಯತೆ ವಿರಳವಾಗಿದ್ದು, ಸಾವಿನ ವಲಯವೆಂದೇ ಕುಖ್ಯಾತಿ ಪಡೆದಿದೆ. ಇಲ್ಲಿನ ಹಿಮಪಾತ ಗಡಿ ಕಾಯುವ ಅನೇಕ ಸೈನಿಕರನ್ನು ಬಲಿ ತೆಗೆದುಕೊಂಡಿದೆ.

ಯುದ್ಧ ಭೂಮಿ ಸಿಯಾಚಿನ್​

ಇದಕ್ಕೆ ನಿದರ್ಶನವೆಂಬಂತಿದೆ ಸೋಮವಾರ ಸಂಭವಿಸಿದ ಹಿಮಪಾತ. ಸುಮಾರು 20,000 ಅಡಿಗಳಷ್ಟು ಎತ್ತರದಲ್ಲಿರುವ ಠಾಣೆ ಬಳಿ ಭಾರೀ ಗಾತ್ರದ ಹಿಮವಿದ್ದು, ಸಂಗ್ರಹವಾದ ಹಿಮದಿಂದ ಜನ ಓಡಾಟದ ದಾರಿ ಸೃಷ್ಟಿಯಾಗಿದೆ. ಈ ದಾರಿಯಲ್ಲಿ ಭಾರತೀಯ ಸೈನಕರು ವಾಡಿಕೆಯ ಗಸ್ತು ನಡೆಸುತ್ತಾರೆ. ಮೊನ್ನೆ ಸೋಮವಾರ ಹೀಗೆ ಗಸ್ತು ತಿರುಗುತ್ತಿದ್ದಾಗ ಹಿಮಪಾತವಾಗಿದ್ದು, 8 ಸೈನಿಕರು ಇದಕ್ಕೆ ಬಲಿಯಾಗಿದ್ದಾರೆ.

ಇಲ್ಲಿನ ನೀರ್ಗಲ್ಲು(ಬಾನಾ ಟಾಪ್‌) ಪ್ರದೇಶ ಒಂದು ಹುಲ್ಲಿನ ಕಡ್ಡಿಯೂ ಬೆಳೆಯುವ ಸ್ಥಳವಾಗಿದ್ದು, ಸಾಲ್ಟೋರೊ ರಿಡ್ಜ್ ಮತ್ತು ಸಿಯಾಚಿನ್ ಹಿಮನದಿಯ ಸಮೀಪವಿದೆ. ದೇಶದ ಅತಿದೊಡ್ಡ ಶುದ್ಧ ನೀರಿನ ಸಂಗ್ರಹವೆನಿಸಿರುವ ಈ ಪ್ರದೆಶ ಸೈನಿಕರ ಪಾಲಿಗೆ ಮಾತ್ರ ಅತ್ಯಂತ ಅಪಾಯದ ಸ್ಥಳವೆನಿಸಿದೆ.

ಯುದ್ಧ ಭೂಮಿ ಸಿಯಾಚಿನ್​

ಜೂನ್ 26, 1987 ರ ರಕ್ತಸಿಕ್ತ ಹೋರಾಟದಿಂದ ಜನಪ್ರಿಯವಾದ ಪ್ರದೇಶವಿದು. ಸುಬೇದಾರ್ ಮೇಜರ್ ಮತ್ತು ಗೌರವಾನ್ವಿತ ಕ್ಯಾಪ್ಟನ್ ಬಾನಾ ಸಿಂಗ್ ಅವರು ಈ ಪ್ರದೇಶದ 1,500 ಅಡಿ ಎತ್ತರದ ಹಿಮ ಗೋಡೆಯ ಮೇಲೆ ಸಣ್ಣ ತಂಡವನ್ನು ಮುನ್ನಡೆಸಿ, ಪಾಕಿಸ್ತಾನದ ವಶದಲ್ಲಿದ್ದ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿದ್ದು. ಈ ಕಾರಣಕ್ಕಾಗಿಯೇ 21,000 ಅಡಿಗಳಿಗಿಂತ ಹೆಚ್ಚು ಎತ್ತರದ ನೀರ್ಗಲ್ಲು ಪ್ರದೇಶವನ್ನು ಹೆಮ್ಮೆಯಿಂದ ಸ್ಮರಿಸಲಾಗುತ್ತದೆ.

ಯುದ್ಧ ಭೂಮಿ ಸಿಯಾಚಿನ್​

ಸೋಮವಾರದ ದುರ್ಘಟನೆ ಮಾತ್ರ ಸಿಯಾಚಿನ್‌ನ ಇತಿಹಾಸವನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದೆ. ತರಬೇತಿ ಪಡೆದ ಸೈನಿಕರು, ಸೇನಾ ಶ್ವಾನಗಳು, ಎತ್ತರ ಪ್ರದೇಶದ ಉಪಕರಣಗಳು ಮತ್ತು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಮಾಡಿದ ರಕ್ಷಣಾ ಕಾರ್ಯಾಚರಣೆ ಕೂಡ ಫಲದಾಯವಾಗಲಿಲ್ಲ.ಭಾರೀ ಹಿಮದ ಅಡಿಯಲ್ಲಿ ಹೂತುಹೋದ ಸೈನಿಕರನ್ನು ಹೊರಗೆಳೆದು ವೈದ್ಯಕೀಯ ಚಿಕಿತ್ಸೆ ನೀಡಿದರೂ, ಘನೀಕರಿಸುವ ತಾಪಮಾನ ಮತ್ತು ಹೆಚ್ಚಿನ ಎತ್ತರದ ಅಪಾಯಗಳಿಂದಾಗಿ ಪ್ರಾಣಹಾನಿ ತಡೆಯಲು ಸಾಧ್ಯವಾಗಲಿಲ್ಲ. ಈ ದುರ್ಘಟನೆಯಲ್ಲಿ ನಾಲ್ಕು ಸೈನಿಕರು ಮತ್ತು ಇಬ್ಬರು ನಾಗರಿಕ ಸಹಾಯಕರು(ಪೋರ್ಟರ್‌) ಪ್ರಾಣ ಕಳೆದುಕೊಂಡರು.

ಸಿಂಗಪುರ ಅಧಿಕೃತ ಭೇಟಿಯಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಕರೆ ಮಾಡಿ ಸಿಯಾಚಿನ್ ದುರ್ಘಟನೆಯ ಕುರಿತು ವಿಚಾರಿಸಿದ್ದಾರೆ. “ಸಿಯಾಚಿನ್‌ನಲ್ಲಿನ ಹಿಮಪಾತದಿಂದಾಗಿ ಸೈನಿಕರು ಮತ್ತು ನಾಗರಿಕರ ನಿಧನಗೊಂಡಿರುವುದು ತೀವ್ರ ನೋವುಂಟು ಮಾಡಿದೆ. ಅವರ ಧೈರ್ಯ ಮತ್ತು ರಾಷ್ಟ್ರಕ್ಕೆ ಮಾಡಿದ ಸೇವೆಗೆ ನಾನು ವಂದಿಸುತ್ತೇನೆ. ಅವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ” ಎಂದು ಸಿಂಗ್‌ ಟ್ವೀಟ್‌ ಕೂಡ ಮಾಡಿದ್ದಾರೆ.

ಸಿಯಾಚಿನ್‌ನ ಇತಿಹಾಸ ಕೆದುಕುತ್ತ ಹೋದರೆ ಇಂತಹ ಅನೇಕ ದುರ್ಘಟನೆಗಳು ಕಣ್ಮುಂದೆ ಬರುತ್ತವೆ. ಫೆಬ್ರವರಿ 2016 ರಲ್ಲಿ, ಮದ್ರಾಸ್ ರೆಜಿಮೆಂಟ್‌ನ 19 ಬೆಟಾಲಿಯನ್‌ನ 10 ಭಾರತೀಯ ಸೈನಿಕರು ಸಿಯಾಚಿನ್‌ನಲ್ಲಿ ಹಿಮದಡಿ ಸಮಾಧಿಯಾಗಿದ್ದರು. ಐದು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಅಚ್ಚರಿಯಾಗಿ ಬದುಕುಳಿದ 33 ವರ್ಷದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರನ್ನು 30 ಅಡಿ ಆಳದ ಹಿಮದಿಂದ ಅಗೆದು ತೆಗೆದು ರಕ್ಷಿಸಲಾಗಿತ್ತು. ಗಾಯಗೊಂಡ ಅವರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಷ್ಟ್ರ ರಾಜಧಾನಿಯ ಏಮ್ಸ್​​ನಲ್ಲಿ ಭರ್ತಿ ಮಾಡಲಾಗಿತ್ತು. ಆದರೆ ಅವರು ಅಲ್ಲಿ ಕೊನೆಯುಸಿರೆಳೆದಿದ್ದರು. ಅದಕ್ಕೂ ಒಂದು ತಿಂಗಳ ಮೊದಲು, ಸಿಯಾಚಿನ್‌ನಲ್ಲಿನ ಹಿಮಪಾತದಲ್ಲಿ ಇನ್ನೂ ನಾಲ್ಕು ಸೈನಿಕರು ಪ್ರಾಣ ಕಳೆದುಕೊಂಡಿದ್ದರು.

ಯುದ್ಧ ಭೂಮಿ ಸಿಯಾಚಿನ್​

1984 ರಿಂದ 2018 ರವರೆಗಿನ 34 ವರ್ಷಗಳಲ್ಲಿ, ಯುದ್ಧದ ಹೊರತಾಗಿ ಇತರ ಅಂಶಗಳಿಂದಾಗಿ 869 ಭಾರತೀಯ ಸೈನಿಕರು ಸಿಯಾಚಿನ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.ಏಪ್ರಿಲ್ 7, 2012 ರಂದು, ಈ ಪ್ರದೇಶದಲ್ಲಿ ಸಂಭವಿಸಿದ ಅತ್ಯಂತ ವಿನಾಶಕಾರಿ ಹಿಮಪಾತವೊಂದರಲ್ಲಿ ಸುಮಾರು 135 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದರು.

ಕಳೆದ ಮೂರು ದಶಕಗಳಲ್ಲಿ ಹಿಮಾಲಯದ ಮೇಲ್ಭಾಗದಲ್ಲಿ ಹಿಮಪಾತದ ಆವರ್ತನವು ಬೆಳೆಯುತ್ತಿದೆ ಎಂದು ನಂಬಲಾಗಿದೆ ಮತ್ತು ಹೆಚ್ಚುತ್ತಿರುವ ತಾಪಮಾನವು ಮಂಜುಗಡ್ಡೆ ಸುಲಭವಾಗಿ ಬಿರುಕುಗೊಳ್ಳಲು ಕಾರಣವಾಗುತ್ತಿದೆ ಮತ್ತು ಹಿಮಗಾಳಿ ನಂತರ ಹಿಮಪಾತವನ್ನು ಸೃಷ್ಟಿಸುತ್ತಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಜೀಬ್ ಕೆಆರ್ ಬರುವಾ: ನವದೆಹಲಿ.

ABOUT THE AUTHOR

...view details