ನವದೆಹಲಿ: ರಾಹುಲ್ ಗಾಂಧಿ ಭೇಟಿ ಬಳಿಕ ಸಚಿನ್ ಪೈಲಟ್ ಬಿಕ್ಕಟ್ಟು ಶಮನವಾಗಿದೆ. ಈ ಹಿನ್ನೆಲೆ ಅವರನ್ನು ಹಲವಾರು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಮರಳಿ ಸ್ವಾಗತಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ನಿನ್ನೆ ರಾತ್ರಿ ಸಚಿನ್ ಪೈಲಟ್, ನಾನು ಯಾವತ್ತೂ ಹುದ್ದೆಗಳಿಗಾಗಿ ತಲೆಕೆಡಿಸಿಕೊಂಡಿಲ್ಲ, ಬದಲಿಗೆ ತತ್ವಗಳಿಗಾಗಿ ಹೋರಾಡಿದ್ದೇನೆ ಎಂದು ಹೇಳಿದರು.
"ಸ್ವಾಗತ ಸಚಿನ್, ರಾಜಸ್ಥಾನವನ್ನು ರಚನಾತ್ಮಕವಾಗಿ ಕಟ್ಟಿ ಬೆಳೆಸಲು ಪಕ್ಷ ನಿಮ್ಮನ್ನು ಕಾಯುತ್ತಿದೆ" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಸಿಂಗ್ವಿ ಟ್ವೀಟ್ ಮಾಡಿದ್ದಾರೆ.