ಕರ್ನಾಟಕ

karnataka

By

Published : Mar 5, 2019, 12:24 PM IST

ETV Bharat / bharat

ಮೂವರು ಯೋಧರು ಹುತಾತ್ಮರಾದ ಹಿನ್ನೆಲೆ... ಸಿಆರ್​​ಪಿಎಫ್​ ಕಾರ್ಯಾಚರಣೆ ನೀತಿ ಪರಿಷ್ಕರಣೆ

ಉಗ್ರರ ನಿರ್ಮೂಲನಾ ಕಾರ್ಯಾಚರಣೆಯಲ್ಲಿ ಆತುರಕ್ಕೆ ಒಳಗಾಗದೆ ಸಮಯ ತೆಗೆದುಕೊಂಡು ಕಾರ್ಯಾಚರಣೆ ನಡೆಸಬೇಕು ಎನ್ನುವ ಸ್ಪಷ್ಟ ಸೂಚನೆ ದೊರೆತಿದೆ ಎಂದು ಸಿಆರ್​ಪಿಎಫ್​​ ಅಧಿಕಾರಿಯೋರ್ವರು ಹೇಳಿದ್ದಾರೆ.

ಸಿಆರ್​ಪಿಎಫ್​​

ನವದೆಹಲಿ: ಕಳೆದ 48 ಗಂಟೆಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂವರು ಸಿಆರ್​ಪಿಎಫ್​ ಯೋಧರು ಹುತಾತ್ಮರಾದ ಬಳಿಕ ಸಿಆರ್​​ಪಿಎಫ್​​​ ತನ್ನ ಕಾರ್ಯಾಚರಣೆಯ ನೀತಿಯನ್ನು ಕೊಂಚ ಪರಿಷ್ಕರಣೆ ಮಾಡಿಕೊಂಡಿದೆ.

ಕಾದು ನೋಡಿ, ಸಮಯ ತೆಗೆದುಕೊಳ್ಳಿ ಎನ್ನುವ ಸಂದೇಶವನ್ನು ಸಿಆರ್​ಪಿಎಫ್​​ ಯೋಧರಿಗೆ ರವಾನಿಸಲಾಗಿದೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ 55,000ಕ್ಕೂ ಹೆಚ್ಚಿನ ಸಿಆರ್​​ಪಿಎಫ್​​ ಯೋಧರಿಗೆ ಉಗ್ರರ ಸತತ ದಾಳಿಯ ಬಳಿಕ ಈ ನೀತಿಯ ಪರಿಷ್ಕರಣೆ ಮಾಡಿ ಕಾದು ನೋಡುವ ತಂತ್ರ ಅನುಸರಿಸಲು ಸೂಚಿಸಲಾಗಿದೆ.

ಭಾನುವಾರದಿಂದ ಎರಡು ದಿನಗಳ ಕಾಲ ನಡೆದ ಉಗ್ರರ ಜೊತೆಗಿನ ಸೇನೆಯ ಗುಂಡಿನ ಚಕಮಕಿಯಲ್ಲಿ ಮೂವರು ಸಿಆರ್​ಪಿಎಫ್​​ ಯೋಧರು ಹುತಾತ್ಮರಾಗಿದ್ದರು. ಸತ್ತಿದ್ದಾನೆ ಎಂದು ಭಾವಿಸಲಾಗಿದ್ದ ಉಗ್ರನೋರ್ವ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ ಇಬ್ಬರು ಪೊಲೀಸರು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದ.

ABOUT THE AUTHOR

...view details