ಕರ್ನಾಟಕ

karnataka

By

Published : Jul 5, 2019, 10:59 PM IST

ETV Bharat / bharat

ವಿಆರ್ ಎಲ್ ಕಂಪನಿಯ ಹೆಸರು ದುರ್ಬಳಕೆ :6 ಜನರ ಬಂಧನ

ವಿಆರ್​​ಎಲ್ ಕಂಪನಿಯ ಟ್ರೇಡ್ ಮಾರ್ಕಿನಲ್ಲಿ ಕೊಂಚ ಬದಲಾವಣೆ ಮಾಡಿ ವಂಚಿಸುತ್ತಿದ್ದರಿಂದ ಹಲವಾರು ಜನರು ಇವರ ವಂಚನೆಯ ಬಲೆಗೆ ಬಿದ್ದಿದ್ದರು. ಇದರಿಂದಾಗಿ ಕಂಪನಿಗೆ ದೊಡ್ಡಮಟ್ಟದ ಆರ್ಥಿಕ ನಷ್ಟ ಉಂಟಾಗಿತ್ತು.

ಬಂಧಿತ ವಂಚಕರು

ತೆಲಂಗಾಣ: ವಿಆರ್ ಎಲ್ ಕಂಪನಿಯ ಹೆಸರನ್ನು ದುರ್ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಜನರನ್ನು ಸೈಬರಾಬಾದ್ ಕಮಿಷನರೇಟ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ವಿಆರ್​ಎಲ್ ಲಾಜಿಸ್ಟಿಕ್ ಲಿಮಿಟೆಡ್ ಕಂಪನಿಯ ಹೆಸರು ಹಾಗೂ ಟ್ರೇಡ್ ಮಾರ್ಕ್​ನ್ನು ಕಾನೂನು ಬಾಹಿರವಾಗಿ ಬಳಸಿ ಜನರಿಗೆ ವಂಚಿಸುತ್ತಿದ್ದರು ಎನ್ನಲಾಗಿದೆ.

ವಿಆರ್​​ಎಲ್ ಕಂಪನಿಯ ಟ್ರೇಡ್ ಮಾರ್ಕಿನಲ್ಲಿ ಕೊಂಚ ಬದಲಾವಣೆ ಮಾಡಿ ವಂಚಿಸುತ್ತಿದ್ದರಿಂದ ಹಲವಾರು ಜನರು ಇವರ ವಂಚನೆಯ ಬಲೆಗೆ ಬಿದ್ದಿದ್ದರು. ಇದರಿಂದಾಗಿ ಕಂಪನಿಗೆ ದೊಡ್ಡಮಟ್ಟದ ಆರ್ಥಿಕ ನಷ್ಟ ಉಂಟಾಗಿತ್ತು. ಈ ಬಗ್ಗೆ ವಿ.ಆರ್.ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಉಪಾಧ್ಯಕ್ಷ ಧ್ರುವರಾಜ್ ಜಾಗೀರ್ದಾರ್ ತೆಲಂಗಾಣದ ರ್ಪೆಟ್ಬಶಿರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಪೋಲಿಸರು 6 ಜನ ವಂಚಕರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಸಂದೀಪ್ ಕುಮಾರ್, ಮುಕೇಶ್, ಅನಿಲ್ ಕುಮಾರ್, ರಾಕೇಶ್ , ಮುಕೇಶ್ ಕುಮಾರ್, ರಾಧೇಶಂ ಎಂದು ಗುರುತಿಸಲಾಗಿದ್ದು, ಇವರ ಮೇಲೆ ಐಪಿಸಿ ಸೆಕ್ಷನ್ 420(ವಂಚನೆ), ಟ್ರೇಡ್ ಮಾರ್ಕ್ ಆ್ಯಕ್ಟ್ 104 ಮತ್ತು ಕಾಪಿ ರೈಟ್ ಆ್ಯಕ್ಟ್ 63ರ ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಸೈಬರಾಬಾದ್ ಕಮಿಷನರೇಟ್ ಎಸಿಪಿ, ಸಾರ್ವಜನಿಕರು ಇಂತಹ ವಂಚಕರ ಬಗ್ಗೆ ಜಾಗೃತರಾಗಿ ಇರುವಂತೆ ಸೂಚಿಸಿದ್ದಾರೆ.

ABOUT THE AUTHOR

...view details