ಕರ್ನಾಟಕ

karnataka

By

Published : May 25, 2020, 10:52 AM IST

ETV Bharat / bharat

ವೈಜಾಗ್ ಅನಿಲ ದುರಂತ: ಎಲ್‌ಜಿ ಪಾಲಿಮರ್ ಸಂಸ್ಥೆ ಸೀಜ್ ಮಾಡಲು ಆಂಧ್ರ ಹೈಕೋರ್ಟ್ ಆದೇಶ

ವಿಶಾಖಪಟ್ಟಣಂನ ಎಲ್​ಜಿ ಪಾಲಿಮರ್ಸ್ ಸಂಸ್ಥೆಯನ್ನು ಸೀಜ್ ಮಾಡುವಂತೆ ಆಂಧ್ರಪ್ರದೇಶ ಹೈಕೋರ್ಟ್ ಆದೇಶಿಸಿದ್ದು, ಯಾರಿಗೂ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ನಿರ್ದೇಶಿಸಿದೆ.

lg
lg

ಹೈದರಾಬಾದ್:ರಾಸಾಯನಿಕಅನಿಲ ಸೋರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಶಾಖಪಟ್ಟಣಂನ ಎಲ್​ಜಿ ಪಾಲಿಮರ್ಸ್ ಸಂಸ್ಥೆಯನ್ನು ಸೀಜ್ ಮಾಡುವಂತೆ ಆಂಧ್ರಪ್ರದೇಶ ಹೈಕೋರ್ಟ್ ಆದೇಶಿಸಿದೆ.

ಕಂಪನಿಯನ್ನು ಸಂಪೂರ್ಣವಾಗಿ ಸೀಜ್ ಮಾಡಿ, ಕಂಪನಿಯ ನಿರ್ದೇಶಕರು ಸೇರಿದಂತೆ ಯಾರಿಗೂ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಜಿಂದೇಂದ್ರ ಕುಮಾರ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಲಲಿತಾ ಕಣ್ಣೇಗಂಟಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕಂಪೆನಿಯ ಆವರಣದಿಂದ ಯಾವುದೇ ವಸ್ತುಗಳು ಹಾಗೂ ಯಂತ್ರೋಪಕರಣಗಳನ್ನು ಬೇರೆಡೆ ಸಾಗಿಸುವಂತಿಲ್ಲ ಎಂದು ಹೇಳಿದೆ.

ಪರಿಶೀಲನೆಗೆ ತೆರಳುವ ಸಮಿತಿಗಳು ಆವರಣದ ಒಳಗೆ ಹೋಗುವುದರ ಕುರಿತು ಹಾಗೂ ಅಲ್ಲಿ ಮಾಡಿದ ಕೆಲಸಗಳ ಕುರಿತು ರಿಜಿಸ್ಟರ್‌ನಲ್ಲಿ ಬರೆದಿಡಬೇಕು ಎಂದು ಆದೇಶ ನೀಡಿದೆ.

ABOUT THE AUTHOR

...view details