ಹೈದರಾಬಾದ್:ಇಂದು ಬೆಳ್ಳಂಬೆಳಗ್ಗೆ ಯುಪಿ ಪೊಲೀಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ವಿಕಾಸ್ ದುಬೆಯನ್ನ ಬೇಟೆಯಾಡಿದ್ದಾರೆ. ಆದ್ರೆ ಈ ಎನ್ಕೌಂಟರ್ ನಮಗೆ ದಿಶಾ ಘಟನೆಯನ್ನ ನೆನಪಿಸುವಂತಿದೆ.
ಹೌದು, 2019 ನವೆಂಬರ್ 27ರ ರಾತ್ರಿ ನಾಲ್ವರು ದುಷ್ಕರ್ಮಿಗಳು ದಿಶಾಳನ್ನು ಅತ್ಯಾಚಾರ ಎಸಗಿ ಜೀವಂತವಾಗಿ ಸುಟ್ಟು ಹಾಕಿದ್ದರು. ತೆಲಂಗಾಣ ಪೊಲೀಸರು 24 ಗಂಟೆಯಲ್ಲೇ ನಾಲ್ವರು ಆರೋಪಿಗಳನ್ನು ಬಂಧಿಸಿ 9 ದಿನದೊಳಗೆ ಎನ್ಕೌಂಟರ್ ಮಾಡಿ ಅವರ ಕಥೆ ಮುಗಿಸಿದ್ದರು.
ದುಷ್ಟರಿಗೆ ತಕ್ಕ ಪಾಠ ಕಲಿಸಿದ್ದ ಕುರುನಾಡ ಕಲಿ...!
ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು ಕಾಮುಕರು. ಈ ಕಾಮಪಿಪಾಸುಗಳ ವಿರುದ್ಧ ದೇಶದ ಜನರೇ ರೊಚ್ಚಿಗೆದ್ದು ಬೀದಿಗಿಳಿದಿದ್ದರು. ಕರುನಾಡ ಮಣ್ಣಿನ ಅಧಿಕಾರಿ ಅಂದು ಈ ದುಷ್ಟರಿಗೆ ತಕ್ಕ ಪಾಠ ಕಲಿಸಿದ್ದರು. ಈ ಸೂಪರ್ ಕಾಪ್ ಕ್ರಮಕ್ಕೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.
ಅರೆಸ್ಟ್ ಆಗಿ 24 ಗಂಟೆಯಲ್ಲೇ ವಿಕಾಸ್ ಎನ್ಕೌಂಟರ್!
ನಿನ್ನೆ ಮಧ್ಯೆಪ್ರದೇಶದ ಉಜ್ಜೈನಿಯಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿತ್ತು. ಉತ್ತರಪ್ರದೇಶದ ಕಾನ್ಪುರ ಪೊಲೀಸರಿಗೆ ಉಜ್ಜೈನಿ ಪೊಲೀಸರು ವಿಕಾಸ್ನನ್ನು ಹಸ್ತಾಂತರಿಸಿದ್ದರು. ಇಂದು ಬೆಳಗ್ಗೆ ಕಾನ್ಪುರಕ್ಕೆ ಕರೆದೊಯ್ಯುವ ಮಾರ್ಗದಲ್ಲಿ ವಿಕಾಸ್ ದುಬೆ ಇದ್ದ ಕಾರು ಪಲ್ಟಿಯಾಗಿತ್ತು. ಈ ವೇಳೆ, ಪೊಲೀಸರ ಗನ್ ಕಿತ್ಕೊಂಡು ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಮತ್ತು ವಿಕಾಸ್ ದುಬೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಯುಪಿ ಪೊಲೀಸರು ವಿಕಾಸ್ ದುಬೆಯನ್ನು ಎನ್ಕೌಂಟರ್ ಮಾಡಿದ್ದಾರೆ. ಅರೆಸ್ಟ್ ಆಗಿ 24 ಗಂಟೆಯಲ್ಲೇ ವಿಕಾಸ್ ದುಬೆ ಎನ್ಕೌಂಟರ್ ಆಗಿರುವುದು ಇಲ್ಲಿ ಗಮನಿಸಬಹುದಾಗಿದೆ.
ಒಟ್ಟಿನಲ್ಲಿ ಈ ಎನ್ಕೌಂಟರ್ ದಿಶಾ ಘಟನೆಯನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.