ಕರ್ನಾಟಕ

karnataka

ETV Bharat / bharat

ಮರ್ಯಾದಾ ಹತ್ಯೆ; ಯುವಕನ ಕೊಲೆ ಸಂಬಂಧ ಇಬ್ಬರ ಬಂಧನ - ಮುಜಫರ್ನಗರ

ಯುವಕನನ್ನು ಕೊಂದ ನಂತರ ಆರೋಪಿಗಳು ಶವವನ್ನು ಆತ್ಮಹತ್ಯೆ ಮಾಡಿಕೊಂಡವನಂತೆ ಬಿಂಬಿಸಲು ಮರಕ್ಕೆ ನೇಣು ಹಾಕಿದ್ದರು. ತಾವೇ ಪೊಲೀಸರಿಗೆ ಕರೆ ಮಾಡಿ ರಾಂಪುರ್ ಗ್ರಾಮದ ಹತ್ತಿರ ಮರದಲ್ಲಿ ಯಾರೋ ನೇಣು ಹಾಕಿಕೊಂಡಿದ್ದಾನೆ ಎಂದು ತಿಳಿಸಿದ್ದರು.

ಮಗಳ ಜೋತೆ ಸಂಬಂಧ ಹೊಂದಿದ್ದ ಯುವಕನ ಹತ್ಯೆ , ಇಬ್ಬರ ಬಂಧನ
ಮಗಳ ಜೋತೆ ಸಂಬಂಧ ಹೊಂದಿದ್ದ ಯುವಕನ ಹತ್ಯೆ , ಇಬ್ಬರ ಬಂಧನ

By

Published : Aug 23, 2020, 3:23 PM IST

Updated : Aug 23, 2020, 4:08 PM IST

ಮುಜಫರ್​ ನಗರ: ಉತ್ತರ ಪ್ರದೇಶದ ಮುಜಫರ್ ನಗರ ಜಿಲ್ಲೆಯಲ್ಲಿ 20 ವರ್ಷದ ಯುವಕನನ್ನು ಕತ್ತು ಹಿಸುಕಿ ಕೊಲೆಗೈದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕೊಲೆಯಾದ ಯುವಕ ಶುಭಮ್ ಓರ್ವ ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಇದಕ್ಕೆ ಬಾಲಕಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು.

ಯುವಕನನ್ನು ಕೊಂದ ನಂತರ ಆರೋಪಿಗಳು ಶವವನ್ನು ಆತ್ಮಹತ್ಯೆ ಮಾಡಿಕೊಂಡವನಂತೆ ಬಿಂಬಿಸಲು ಮರಕ್ಕೆ ನೇಣು ಹಾಕಿದ್ದರು. ತಾವೇ ಪೊಲೀಸರಿಗೆ ಕರೆ ಮಾಡಿ ರಾಂಪುರ್ ಗ್ರಾಮದ ಹತ್ತಿರ ಮರದಲ್ಲಿ ಯಾರೋ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಈಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧನಕ್ಕೊಳಗಾದವರಲ್ಲಿ ಬಾಲಕಿಯ ಸಹೋದರ ಮತ್ತು ಆತನ ಸ್ನೇಹಿತ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಮೂರನೇ ಆರೋಪಿ ಆಗಿರುವ ಬಾಲಕಿಯ ತಂದೆ ಇನ್ನೂ ಪತ್ತೆಯಾಗಿಲ್ಲ.

ಉಪ ಪೊಲೀಸ್ ವರಿಷ್ಠಾಧಿಕಾರಿ ಗಿರ್ಜಾ ಶಂಕರ್ ತ್ರಿಪಾಠಿ

"ತನಿಖೆಯ ಸಮಯದಲ್ಲಿ, ಶುಭಮ್ ಹತ್ಯೆಯಲ್ಲಿ ಹುಡುಗಿಯ ತಂದೆ, ಸಹೋದರ ಮತ್ತು ಸ್ನೇಹಿತ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಗಿರ್ಜಾ ಶಂಕರ್ ತ್ರಿಪಾಠಿ ಹೇಳಿದ್ದಾರೆ.

"ಶುಭಮ್​ನನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಾಲಕಿಯ ತಂದೆ ಇಡೀ ಪ್ರಕರಣಕ್ಕೆ ಪ್ರಮುಖ ಆರೋಪಿಯಾಗಿದ್ದಾನೆ. ಶುಭಮ್​​ಗೆ ವಿಷ ನೀಡಿ, ಕತ್ತು ಹಿಸುಕಿ ಕೊಂದು, ನಂತರ ಅನುಮಾನ ಬಾರದ ರೀತಿಯಲ್ಲಿ ಮರಕ್ಕೆ ನೇಣು ಹಾಕಲಾಗಿತ್ತು.

ಬಾಲಕಿಯ ಸಹೋದರ ಮತ್ತು ಆತನ ಸ್ನೇಹಿತ ಈ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆಗಸ್ಟ್ 16 ರಂದು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶುಭಮ್ ಅವರ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ನಡೆದಿದರುವುದಾಗಿ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : Aug 23, 2020, 4:08 PM IST

ABOUT THE AUTHOR

...view details