ಕರ್ನಾಟಕ

karnataka

ETV Bharat / bharat

ಬೆಳಗಿನ ಸಮಯ ಪಾರ್ಕ್​ಗಳ ಬಾಗಿಲು ತೆರೆಯಲು ಉ.ಪ್ರ. ಸರ್ಕಾರ ಅನುಮತಿ - ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದಲ್ಲಿ ಉದ್ಯಾನವನಗಳನ್ನು ಬೆಳಗಿನ ಸಮಯದಲ್ಲಿ ತೆರೆಯಬಹುದು ಎಂದು ಸಿಎಂ ಅದಿತ್ಯನಾಥ್ ತಿಳಿಸಿದ್ದಾರೆ.

UP CM directs parks across state can be opened during morning
ಉತ್ತರಪ್ರದೇಶದಲ್ಲಿ ಕೆಲವು ಸೇವೆಗಳಿಗೆ ಸಡಿಲಿಕೆ ನೀಡಿದ ಸಿಎಂ

By

Published : May 27, 2020, 12:19 PM IST

ಲಕ್ನೋ: ರಾಜ್ಯಾದ್ಯಂತ ಉದ್ಯಾನವನಗಳನ್ನು ಬೆಳಗಿನ ಸಮಯದಲ್ಲಿ ತೆರೆಯಬಹುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ರಾಜ್ಯಾದ್ಯಂತ ಉದ್ಯಾನವನಗಳನ್ನು ಬೆಳಗಿನ ಸಮಯದಲ್ಲಿ ತೆರೆಯಬಹುದಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ್ದಾರೆ. ಆದ್ದರಿಂದ, ಇಂದು ಉದ್ಯಾನವನಗಳನ್ನು ತೆರೆಯುವ ಸಮಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಣಕಾಸು ಮತ್ತು ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಗಸ್ತನ್ನು ಬಲಪಡಿಸಬೇಕೆಂದು ಆದಿತ್ಯನಾಥ್ ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರು ಮತ್ತು ಓರ್ವ ಚಾಲಕನೊಂದಿಗೆ ಟ್ಯಾಕ್ಸಿ ಸಂಚಾರಕ್ಕೆ ಅನುವು ಮಾಡಬೇಕು ಎಂದು ಸಿಎಂ ತಿಳಿಸಿದ್ದಾರೆ ಎಂದ ಅವರು, 1265 ಕ್ಕೂ ಹೆಚ್ಚು ರೈಲುಗಳಲ್ಲಿ ಸುಮಾರು 17,00,728 ಜನರು ವಿವಿಧ ರಾಜ್ಯಗಳಿಂದ ಮರಳಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 229 ಹೊಸ ಕೋವಿಡ್​ -19 ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 6724 ಕ್ಕೆ ತಲುಪಿದೆ ಎಂದು ಉತ್ತರ ಪ್ರದೇಶದ ಆರೋಗ್ಯ ಸೇವಾ ನಿರ್ದೇಶನಾಲಯ ತಿಳಿಸಿದೆ.

ABOUT THE AUTHOR

...view details