ಕರ್ನಾಟಕ

karnataka

By

Published : Aug 26, 2020, 1:23 PM IST

ETV Bharat / bharat

ಒಂದೇ ಕುಟುಂಬದ 23 ಮಂದಿ ಮೇಲೆ ಆ್ಯಸಿಡ್​ ದಾಳಿ!

ಒಂದೇ ಕುಟುಂಬದ 23 ಸದಸ್ಯರ ಮೇಲೆ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಝಾನ್ಸಿಯ ಬಸಾರ್​ ಗ್ರಾಮದಲ್ಲಿ ನಡೆದಿದೆ.

ಒಂದೇ ಕುಟುಂಬದ 23 ಮಂದಿ ಮೇಲೆ ಆ್ಯಸಿಡ್​ ದಾಳಿ
ಒಂದೇ ಕುಟುಂಬದ 23 ಮಂದಿ ಮೇಲೆ ಆ್ಯಸಿಡ್​ ದಾಳಿ

ಝಾನ್ಸಿ (ಉತ್ತರ ಪ್ರದೇಶ):ಒಂದೇಕುಟುಂಬದ 23 ಸದಸ್ಯರ ಮೇಲೆ ನೆರೆಮನೆಯವರು ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಬಸಾರ್​ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಇತರರಿಗೆ ಸಣ್ಣಪುಟ್ಟ ಸುಟ್ಟು ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಡಿಯುವ ನೀರಿನ ವಿಚಾರದಲ್ಲಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅಕ್ಕಸಾಲಿಗ ಕುಟುಂಬದವರು ತಮ್ಮ ಮನೆಯ ಟೆರೇಸ್​ ಮೇಲಿನಿಂದ 23 ಜನರ ಮೇಲೆ ಆ್ಯಸಿಡ್​ ಎರಚಿದ್ದಾರೆ. ಇನ್ನು ಘಟನೆ ಸಂಭವಿಸುತ್ತಿದ್ದಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

"ಸದ್ಯ ದೂರು ದಾಖಲಾಗಿದ್ದು, ಪರಾರಿಯಾಗಿರುವವರನ್ನು ಪೊಲೀಸರು ಹುಡುಕುತ್ತಿದ್ದಾರೆ. ದೂರಿನಲ್ಲಿ 6 ಜನರ ಮೇಲೆ ಕೇಸ್​​ ದಾಖಲಾಗಿದೆ. ಅದರಲ್ಲಿ ನಾಲ್ವರನ್ನು ಬಂಧಿಸಲಾಗಿದೆ" ಎಂದು ಎಸಿಪಿ ರಾಹುಲ್ ಶ್ರೀವಾಸ್ತವ್ ಹೇಳಿದ್ದಾರೆ.

ABOUT THE AUTHOR

...view details