ನವದೆಹಲಿ: ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು' ಸಿನಿಮಾದಲ್ಲಿ ಸಿಎಂ ಆಗಿದ್ದ ನಾಯಕ ಸಂಚಾರ ನಿಯಮ ಪಾಲಿಸದ ವಾಹನ ಸವಾರರ ಮೇಲೆ ಗರಿಷ್ಠ ದಂಡ ವಿಧಿಸುವ ನಿಯಮ ಆಫ್ ಹಾಗೂ ಆನ್ ಸ್ಕ್ರೀನ್ನಲ್ಲಿ ಮೆಚ್ಚಿಗೆ ಪಡೆದಿತ್ತು. ಈಗ ಇದನ್ನೇ ಹೋಲುವ ಸಂಚಾರಿ ಕಾಯ್ದೆ ಜಾರಿಗೆ ಬರುತ್ತಿದೆ.
ಕೇಂದ್ರ ಸಚಿವ ಸಂಪುಟ ಮೋಟಾರ್ ವಾಹನ (ತಿದ್ದುಪಡಿ) ಕಾಯ್ದೆ ಪ್ರಸ್ತಾವನೆಗೆ ಅನುಮತಿ ನೀಡಿದೆ. ಸಾರಿಗೆ ನಿಯಮ ಉಲ್ಲಂಘನೆಯ ನಿಯಂತ್ರಣ, ಸವಾರರ ಹಾಗೂ ಸಾರ್ವಜನಿಕರ ಸುರಕ್ಷತೆ, ದಂಡ ಪಾವತಿ ಶುಲ್ಕ ಏರಿಕೆಯ ಜೊತೆಗೆ ಸಂಚಾರ ಠಾಣೆಗಳಲ್ಲಿನ ಭ್ರಷ್ಟಾಚಾರವನ್ನು ತಹಬದಿಗೆ ತರುವ ಕಠಿಣ ನಿಯಮಗಳು ತಿದ್ದುಪಡಿ ಆಗಲಿರುವ ಕಾಯ್ದೆಯಲ್ಲಿ ಒಳಗೊಂಡಿದೆ.