ಕರ್ನಾಟಕ

karnataka

ETV Bharat / bharat

ರೈಲು, ಬಸ್ ಪ್ರಯಾಣಕ್ಕೆ ವಲಸಿಗರಿಂದ ಹಣ ವಸೂಲಿ ದುರದೃಷ್ಟಕರ; ಮಾಯಾವತಿ - ರೈಲು, ಬಸ್ ಪ್ರಯಾಣಕ್ಕಾಗಿ ವಲಸಿಗರಿಂದ ಹಣ ವಸೂಲಿ ಮಾಯಾವತಿ

ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸಿಗರನ್ನು ಮನೆಗೆ ಕರೆತರುವ ವೇಳೆ, ಕಾರ್ಮಿಕರಿಂದ ಪ್ರಯಾಣ ದರವನ್ನು ವಸೂಲಿ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಾಯಾವತಿ, ಇದೊಂದು ದುರದೃಷ್ಟಕರ ಸಂಗತಿ ಎಂದಿದ್ದಾರೆ.

Mayawati
ಮಾಯಾವತಿ

By

Published : May 5, 2020, 10:44 PM IST

ಲಕ್ನೋ (ಉತ್ತರ ಪ್ರದೇಶ): ಲಾಕ್​ಡೌನ್​ನಿಂದಾಗಿ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸಿಗರ ಬಳಿ ಬಸ್​ ಮತ್ತು ರೈಲಿನ ಪ್ರಯಾಣ ದರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಡೆಯುತ್ತಿರುವುದು ನಿಜಕ್ಕೂ ಬೇಸರ ಹಾಗೂ ದುರದೃಷ್ಟಕರ ಸಂಗತಿ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ರೈಲು ಮತ್ತು ಬಸ್ಸಿನ ಮೂಲಕ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ಕಳುಹಿಸುವ ವೇಳೆ ಬಡ ಕಾರ್ಮಿಕರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣ ವಸೂಲಿ ಮಾಡುತ್ತಿರುವುದು ದುರದೃಷ್ಟಕರ ಎಂದು ಮಾಯಾವತಿ ಟ್ವೀಟ್​ ಮಾಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲು ಟಿಕೆಟ್‌ಗಾಗಿ ವಲಸೆ ಕಾರ್ಮಿಕರ ಮೇಲೆ ಶುಲ್ಕ ವಿಧಿಸಬಾರದು ಎಂದು ಹಲವಾರು ವಿರೋಧ ಪಕ್ಷಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸೋಮವಾರ ವಿವಾದ ಭುಗಿಲೆದ್ದಿತ್ತು. ಕಾಂಗ್ರೆಸ್ ಅವರಿಗೆ ಹಣ ನೀಡಲು ಮುಂದಾದರೆ, ರೈಲ್ವೆ ಇಲಾಖೆಗೆ ಈಗಾಗಲೇ 85 ಪ್ರತಿಶತದಷ್ಟು ಪ್ರಯಾಣ ವೆಚ್ಚವನ್ನು ಭರಿಸಲಾಗಿದೆ ಎಂದು ಬಿಜೆಪಿ ಹೇಳಿದೆ ಎಂದು ಮಾಯಾವತಿ ಇದೇ ವೇಳೆ ಉಲ್ಲೇಖಿಸಿದ್ದಾರೆ.

ವಲಸಿಗರ ಶುಲ್ಕವನ್ನು ಪಾವತಿಸಲು ಸರ್ಕಾರದಿಂದ ಸಾಧ್ಯವಾಗದಿದ್ದರೆ, ಬಿಎಸ್ಪಿ ತನ್ನ ಕಾರ್ಯಕರ್ತರ ಸಹಾಯವನ್ನು ತೆಗೆದುಕೊಂಡು ಈ ಕಾರ್ಮಿಕರಿಗೆ ವ್ಯವಸ್ಥೆ ಮಾಡಲು ಸಹಕರಿಸುತ್ತದೆ ಎಂದು ಮಾಯಾವತಿ ತಿಳಿಸಿದ್ದಾರೆ.

ABOUT THE AUTHOR

...view details