ಕರ್ನಾಟಕ

karnataka

ETV Bharat / bharat

ಮರಾಠರ ನಾಡಿನಲ್ಲಿ 'ಉದ್ಧವ್'​ ಸರ್ಕಾರ... ಶಿವಾಜಿ, ಈಶ್ವರನ ಹೆಸರಿನಲ್ಲಿ ಠಾಕ್ರೆ ಪ್ರಮಾಣ ವಚನ! - ಉದ್ಧವ್ ಠಾಕ್ರೆ ಪ್ರಮಾಣ ವಚನ

ಮಹಾರಾಷ್ಟ್ರದ 19ನೇ ಮುಖ್ಯಮಂತ್ರಿಯಾಗಿ ಶಿವಸೇನೆಯ ಉದ್ಧವ್​ ಠಾಕ್ರೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಶಿವಾಜಿ ಪಾರ್ಕ್​​ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದರು.

Uddhav Thackeray
ಮಹಾರಾಷ್ಟ್ರ ಸಿಎಂ ಆಗಿ ಉದ್ಧವ್​

By

Published : Nov 28, 2019, 7:24 PM IST

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆಯ ಸೂತ್ರಧಾರ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಶಿವಾಜಿ ಪಾರ್ಕ್​ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್​ ಸಿಂಗ್​ ಕೋಶಿಯಾರಿ ಪ್ರತಿಜ್ಞಾವಿಧಿ ಬೋಧಿಸಿದರು.

ಮಹಾರಾಷ್ಟ್ರ ಸಿಎಂ ಆಗಿ ಉದ್ಧವ್​ ಠಾಕ್ರೆ

ಎನ್​ಸಿಪಿ+ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಂಡು ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ 19ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಶಿವಸೇನೆಗೆ ಒಲಿದು ಬಂದಿರುವ ಮೊದಲ ಮುಖ್ಯಮಂತ್ರಿ ಪದವಿ ಇದಾಗಿದೆ. ಚುನಾವಣೆ ವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ತದನಂತರ ಸೀಟು ಹಂಚಿಕೆ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಬಿಜೆಪಿ ತೊರೆದು ಎನ್​ಸಿಪಿ+ಕಾಂಗ್ರೆಸ್​ ಜತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ.

ಇವರ ಜತೆಗೆ ಶಿವಸೇನೆಯ ಏಕನಾಥ್ ಸಂಬಾಜಿ​ ಶಿಂಧೆ, ಸುಭಾಶ್​ ದೇಸಾಯಿ, ಎನ್​ಸಿಪಿಯಿಂದ ಜಯಂತ್​ ಪಾಟೀಲ್​, ಚಗುಣ್​ ಬುಜ್ಬಲ್​, ಕಾಂಗ್ರೆಸ್​​ನಿಂದ ಬಾಳಾ ಸಾಹೇಬ್​ ತೋರಾಟ್​ ಹಾಗೂ ನಿತಿನ್​ ರಾವತ್​ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಅದ್ಧೂರಿ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್​ನಾಥ್​, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​, ಕಾಂಗ್ರೆಸ್​ ಮುಖಂಡ ಅಹ್ಮದ್​ ಪಟೇಲ್​, ಎನ್​ಸಿಪಿ ನಾಯಕ ಪ್ರಫುಲ್​ ಪಟೇಲ್​ ಸೇರಿದಂತೆ ಪ್ರಮುಖರು ಹಾಜರಿದ್ದರು.

ABOUT THE AUTHOR

...view details