ಕರ್ನಾಟಕ

karnataka

ETV Bharat / bharat

ಹುತಾತ್ಮರ ಗ್ಯಾಲರಿ ಉದ್ಘಾಟಿಸಿದ ಉದ್ಧವ್ ಠಾಕ್ರೆ - 2008ರ ಜನವರಿ 26 ರಂದು ನಡೆದ ಉಗ್ರರ ದಾಳಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು ಮುಂಬೈನ ಪೊಲೀಸ್ ಪ್ರಧಾನ ಕಚೇರಿಯಲ್ಲಿ 'ಹುತಾತ್ಮ ದಳನಾಂಚ್' (ಹುತಾತ್ಮರ ಗ್ಯಾಲರಿ) ಅನ್ನು ಉದ್ಘಾಟಿಸಿದರು.

ಹುತಾತ್ಮರ ಗ್ಯಾಲರಿ ಉದ್ಘಾಟನೆ
ಹುತಾತ್ಮರ ಗ್ಯಾಲರಿ ಉದ್ಘಾಟನೆ

By

Published : Nov 26, 2020, 5:23 PM IST

ಮುಂಬೈ: 2008ರ ಜನವರಿ 26 ರಂದು ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮ ಯೋಧರ ಸವಿನೆನಪಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು 'ಹುತಾತ್ಮ ದಳನಾಂಚ್​' (ಹುತಾತ್ಮರ ಗ್ಯಾಲರಿ) ಅನ್ನು ಉದ್ಘಾಟಿಸಿದರು.

ಮುಂಬೈನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹುತಾತ್ಮರ ಗ್ಯಾಲರಿಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೊರೊನಾ ನಿಯಂತ್ರಣ ಕುರಿತು ಮಹಾರಾಷ್ಟ್ರ ಪೊಲೀಸರ ಕಾರ್ಯವೈಖರಿಯ ಕುರಿತಾದ ಕಾಫಿ ಟೇಬಲ್ ಪುಸ್ತಕ ( ಅತುಲ್ಯ ಹಿಮ್ಮತ್) ಅನ್ನು ಬಿಡುಗಡೆ ಮಾಡಿದರು. ಈ ವೇಳೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ ಸಹ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.

2008 ರ ನವೆಂಬರ್ 26 ರಂದು ಮುಂಬೈನಲ್ಲಿ ನಾಲ್ಕು ದಿನಗಳ ಕಾಲ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ 166 ಜನ ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ABOUT THE AUTHOR

...view details