ಬಿಹಾರ :ಮಂಜರ್ ಕುಂಡ್ನಲ್ಲಿರುವ ಜಲಪಾತವೊಂದರಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಸಿಲುಕಿ, ಹೊರಬರಲು ಒದ್ದಾಡಿರುವ ಘಟನೆ ನಡೆದಿದೆ.
ಜಲಪಾತದಲ್ಲಿ ದಿಢೀರ್ ನೀರಿನ ಹರಿವು ಹೆಚ್ಚಳ; ಪ್ರಾಣಾಪಾಯದಿಂದ ಯುವಕರ ರಕ್ಷಣೆ - ಪೊಲೀಸರಿಂದ ರಕ್ಷಣೆ
ಜಲಪಾತವೊಂದರಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಸಿಲುಕಿ ಹೊರಬರಲು ಒದ್ದಾಡಿದ್ದಾರೆ. ಬಳಿಕ ಪೊಲೀಸರು ಸ್ಥಳೀಯರ ಸಹಾಯದಿಂದ ಅವರನ್ನು ರಕ್ಷಿಸಿದ್ದಾರೆ.
![ಜಲಪಾತದಲ್ಲಿ ದಿಢೀರ್ ನೀರಿನ ಹರಿವು ಹೆಚ್ಚಳ; ಪ್ರಾಣಾಪಾಯದಿಂದ ಯುವಕರ ರಕ್ಷಣೆ ಜಲಪಾತದಲ್ಲಿ ಸಿಲುಕಿದ ಯುವಕರು](https://etvbharatimages.akamaized.net/etvbharat/prod-images/768-512-7856211-thumbnail-3x2-mng.jpg)
ಜಲಪಾತದಲ್ಲಿ ಸಿಲುಕಿದ ಯುವಕರು
ನೀರಿನ ಹರಿವು ಹೆಚ್ಚಿದ್ದರಿಂದ ಯುವಕರಿಬ್ಬರೂ ಹಲವು ಗಂಟೆಗಳ ಕಾಲ ನೀರಿನಲ್ಲಿಯೇ ಸಿಲುಕಿಕೊಂಡಿದ್ದರು. ಬಳಿಕ ದಾರಿಗವ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಾಯದಿಂದ ಯುವಕರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ್ದಾರೆ.
ಜಲಪಾತದಲ್ಲಿ ಸಿಲುಕಿದ ಯುವಕರು
ಈ ಯುವಕರು ಸಸಾರಂ ನಿವಾಸಿಗಳಾಗಿದ್ದು, ಮಂಜರ್ ಕುಂಡ್ನ ಜಲಪಾತಕ್ಕೆ ಬಂದಿದ್ದರು. ಈ ವೇಳೆ ದಿಢೀರ್ ಮಳೆಯಾಗಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ಯುವಕರಿಬ್ಬರೂ ನೀರಿನಲ್ಲಿ ಸಿಲುಕಿಕೊಂಡಿದ್ದರು.