ಕರ್ನಾಟಕ

karnataka

By

Published : Apr 30, 2020, 7:42 AM IST

ETV Bharat / bharat

ಮೇಘಾಲಯ: ಕಾಡು ಅಣಬೆ ಸೇವಿಸಿ ಇನ್ನಿಬ್ಬರ ಸಾವು, ಮೃತರ ಸಂಖ್ಯೆ 4ಕ್ಕೆ

ಕಾಡು ಅಣಬೆಗಳನ್ನು ಸೇವಿಸಿ ಶಿಲ್ಲಾಂಗ್‌ನಲ್ಲಿ ಇನ್ನೂ ಇಬ್ಬರು ಮೃತಪಟ್ಟಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 4ಕ್ಕೇರಿದೆ.

death
death

ಶಿಲ್ಲಾಂಗ್ (ಮೇಘಾಲಯ):ಪಶ್ಚಿಮ ಜೈನ್ತಿಯಾ ಬೆಟ್ಟದ ಇಂಡೋ-ಬಾಂಗ್ಲಾ ಗಡಿಯಲ್ಲಿರುವ ಹಳ್ಳಿಯಲ್ಲಿ ಕಾಡು ಅಣಬೆಗಳನ್ನು ಸೇವಿಸಿ ಇನ್ನಿಬ್ಬರು ಮೃತಪಟ್ಟಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 4ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮ್ಲಾರೆಮ್ ಸಿವಿಲ್ ಉಪವಿಭಾಗ ವ್ಯಾಪ್ತಿಯ ಲ್ಯಾಮಿನ್ ಗ್ರಾಮದಲ್ಲಿ ಹತ್ತಿರದ ಕಾಡಿನಿಂದ ಅಣಬೆಗಳನ್ನು ಸಂಗ್ರಹಿಸಿ ಸೇವಿಸಿದ 3 ಕುಟುಂಬಗಳ 18 ಜನ ತೀವ್ರ ಅಸ್ವಸ್ಥರಾಗಿದ್ದರು.

ಉಳಿದವರು ಶಿಲ್ಲಾಂಗ್​ನ ವುಡ್​ಲ್ಯಾಂಡ್ ಆಸ್ಪತ್ರೆ, ಇಲಾಂಗ್‌ನ ಜೋವಾಯಿ ಸಿವಿಲ್ ಆಸ್ಪತ್ರೆ ಹಾಗೂ ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details