ಕರ್ನಾಟಕ

karnataka

ETV Bharat / bharat

ಅಮಾನತಾದ ಸಂಸದರ ರಾತ್ರಿ ಧರಣಿ ಹಾಗೂ ಹಾಡು, ಎರಡು ಫ್ಯಾನ್, ಮನೆ ಇಡ್ಲಿ, ಬರ್ತ್​ಡೇ ವಿಶ್​..! - ಕೃಷಿ ಮಸೂದೆಗಳು

ರಾಜ್ಯಸಭೆಯಿಂದ ಒಂದು ವಾರದ ಮಟ್ಟಿಗೆ ಅಮಾನತುಗೊಂಡಿರುವ ಸಂಸದರು ಪಾರ್ಲಿಮೆಂಟ್ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.

MPs protest
ಸಂಸದರ ಧರಣಿ

By

Published : Sep 22, 2020, 6:44 AM IST

ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಮಂಡನೆ ವೇಳೆ ಗದ್ದಲ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತಾಗಿದ್ದ ಎಂಟು ಮಂದಿ ಸಂಸದರು ಸಂಸತ್ ಆವರಣದಲ್ಲಿನ ಗಾಂಧಿ ಪ್ರತಿಮೆಯ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಸೋಮವಾರ ಬೆಳಗ್ಗೆ ಆರಂಭವಾದ ಧರಣಿ ರಾತ್ರಿಯೂ ಮುಂದುವರೆದಿದ್ದು, ಗಾಂಧಿ ಪ್ರತಿಮೆಯ ಬಳಿಯ ಹುಲ್ಲು ಹಾಸಿನ ಮೇಲೆ ಕುಳಿತು ಕೃಷಿ ಮಸೂದೆಗಳು ಹಾಗೂ ತಮ್ಮನ್ನು ಅಮಾನತುಗೊಳಿಸಿದ ನಿರ್ಧಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಹಲವು ವಿಪಕ್ಷಗಳ ನಾಯಕರು, ಸಂಸದರು ಅಮಾನತಾದ ಸಂಸದರನ್ನು ಭೇಟಿಯಾಗಿ ಪ್ರತಿಭಟನಾಕಾರರಿಗೆ ನೈತಿಕ ಬೆಂಬಲ ನೀಡಿದರು. ಗುಲಾಂ ನಬೀ ಆಜಾದ್, ಅಧೀರ್ ರಂಜನ್ ಚೌಧರಿ, ದಿಗ್ವಿಜಯ್ ಸಿಂಗ್ ಮುಂತಾದವರು ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಎನ್​​ಸಿಪಿಯ ಸುಪ್ರಿಯಾ ಸುಳೆ ಹಾಗೂ ಕಾಂಗ್ರೆಸ್​​ನ ಹಿಬಿ ಎಡೆನ್​ ಧರಣಿ ನಿರತರಿಗೆ ಸಾಥ್ ನೀಡಿದರು. ಈ ವೇಳೆ ಸುಪ್ರಿಯಾ ಸುಳೆ ಅಮಾನತಾದ ಕಾಂಗ್ರೆಸ್ ಸಂಸದ ರಾಜೀವ್ ಸತವ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹಾಡುಗಳನ್ನು ಸಹ ಹಾಡಲಾಯಿತು. ಇದನ್ನು ಸಂಸದ ಸಂಜಯ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಧರಣಿ ನಿರತ ಸಂಸದರು ಎರಡು ಫ್ಯಾನ್​ಗಳನ್ನು ಸ್ಥಳದಲ್ಲಿ ಅಳವಡಿಸಿಕೊಂಡಿದ್ದರು. ಡಿಎಂಕೆ ನಾಯಕ ತಿರುಚಿ ಶಿವ ಅವರು ಮನೆಯಿಂದ ಕಳಿಸಿದ ಇಡ್ಲಿಗಳನ್ನು ಸಂಸದರು ಸವಿದಿದ್ದಾರೆ.

ತಮ್ಮ ಧರಣಿ ಮುಂದುವರೆಸಿರುವ ಅಮಾನತಾದ ಸಂಸದರು, ಸರ್ಕಾರದ ಕ್ರಮದ ವಿರುದ್ಧ ಹಾಗೂ ಕೃಷಿ ಮಸೂದೆಗಳ ವಿರುದ್ಧ ಇಂದೂ ಪ್ರತಿಭಟನೆ ಮುಂದುವರೆಸಲಿದ್ದಾರೆ.

ABOUT THE AUTHOR

...view details