ಕರ್ನಾಟಕ

karnataka

ಮಂಗಳವಾರದ ರಾಶಿ ಭವಿಷ್ಯ: ಈ ರಾಶಿಯವರು ಇಂದು ಶುಭ ಸುದ್ದಿ ಪಡೆಯುತ್ತೀರಿ

By

Published : Jul 30, 2019, 5:01 AM IST

ಮಂಗಳವಾರದ ರಾಶಿ ಭವಿಷ್ಯ ಹೀಗಿದೆ. ಈ ರಾಶಿಯುಳ್ಳವರು ಇಂದು ಶುಭ ಸುದ್ದಿಗಳನ್ನು ಪಡೆಯುತ್ತೀರಿ ಎಂದು ಗಣೇಶ ಹೇಳುತ್ತಾನೆ.

ಮಂಗಳವಾರದ ರಾಶಿ ಭವಿಷ್ಯ

ಮೇಷ:ನಿಮ್ಮ ದಿನ ಇಂದು ಯಶಸ್ಸಿನ ಬೆಳಕಿನಿಂದ ಹೊಳೆಯುತ್ತಿದೆ. ನೀವು ದೂರದೃಷ್ಟಿ ಉಳ್ಳ ತೀಕ್ಷ್ಣಮತಿಯಾಗಿದ್ದೀರಿ. ನಿಮ್ಮ ಮಹತ್ವಾಕಾಂಕ್ಷೆ ನಿಮಗೆ ಸಾಧ್ಯವಾಗುತ್ತದೆ, ಕೆಲಸದ ಒತ್ತಡ ಕಡಿಮೆ ಇರಲಿ. ನಿಮ್ಮ ಆಶಾವಾದದ ಸಾಮರ್ಥ್ಯಗಳು ನಿಮಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡುತ್ತವೆ. ಸರ್ವಶಕ್ತನ ಮೇಲೆ ನಂಬಿಕೆ ಇರಲಿ.

ವೃಷಭ:ಇಂದು ನೀವು ನಿಮ್ಮೊಂದಿಗೆ ಸ್ವಲ್ಪ ಗುಣಮಟ್ಟದ ಸಮಯ ಕಳೆಯಲು ಸೂಕ್ತವಾದ ದಿನ. ಹಿಂದೆಂದೂ ಇಲ್ಲದಂತೆ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ನಿಮ್ಮ ದಿನವು ಮಿತ್ರರು ಹಾಗೂ ಕುಟುಂಬದೊಂದಿಗೆ ಆಕರ್ಷಕ ಭೋಜನ ಮತ್ತು ಮನರಂಜನೆಯೊಂದಿಗೆ ಸ್ನೇಹಮಯ ಭೋಜನಕೂಟ ಒಳಗೊಂಡಿರುತ್ತದೆ. ನೀವು ಕಟುವಾದ, ಭರ್ಜರಿಯಾದ ಮತ್ತು ಅತ್ಯಂತ ಸ್ವಾದಿಷ್ಟ ರುಚಿಯನ್ನು ಬಯಸುತ್ತೀರಿ, ನಿಮ್ಮ ಮನಸೋ ಇಚ್ಛೆ ಅದನ್ನು ನೆರವೇರಿಸಿಕೊಳ್ಳಿ.

ಮಿಥುನ: ಇಂದು ನೀವು ಆತಂಕ ಮತ್ತು ಅಸೌಖ್ಯ ಅನುಭವಿಸಬಹುದು ಮತ್ತು ನೀವು ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮಾತ್ರವೇ ನೀವು ಪ್ರೀತಿಸಿದವರ ಗೋಪ್ಯ ಪ್ರೀತಿಯನ್ನು ಪಡೆಯುತ್ತೀರಿ. ಇಲ್ಲಿಯವರೆಗೂ ಆಗಿದ್ದು ಆಗಿಹೋಯಿತು. ಹಳೆಯದನ್ನು ಹಿಂದಕ್ಕೆ ಬಿಡಿ ಮತ್ತು ವಿಶ್ವಾಸದಿಂದ ಉಜ್ವಲ ನಾಳೆಯತ್ತ ಮುನ್ನಡೆಯಿರಿ.

ಕರ್ಕಾಟಕ: ನಿಮ್ಮ ಮನಸ್ಥಿತಿ ಅಥವಾ ಮನಸ್ಸು ಅವಿಶ್ರಾಂತ ಮತ್ತು ಕೆರಳಿಸುವಂತಿರುತ್ತದೆ. ಪ್ರತಿಕೂಲ ಪರಿಸ್ಥಿತಿಗಳು ನಿಮ್ಮ ಮನೆಬಾಗಿಲು ತಟ್ಟುತ್ತವೆ, ಆದ್ದರಿಂದ ತಾಳ್ಮೆ ಇರಲಿ ಮತ್ತು ಅವುಗಳನ್ನು ಧೈರ್ಯದಿಂದ ಎದುರಿಸಿರಿ. ಈ ಧೈರ್ಯ ನಿಮ್ಮನ್ನು ಅಗೋಚರವಾದ ಯಶಸ್ಸಿನತ್ತ ಮುನ್ನಡೆಸುತ್ತದೆ. ಮುಂಗೋಪದ ಮನೋಭಾವದ ಮನಸ್ಸುಗಳು ಪ್ರತಿಕೂಲತೆಯನ್ನು ಎದುರಿಸಲು ಕಷ್ಟಪಡಬಹುದು.

ಸಿಂಹ: ಇಂದು ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದೃಢ ನಿರ್ಧಾರ ಕೈಗೊಳ್ಳಲು ಶಕ್ತರಾಗುತ್ತೀರಿ. ಇಂದು ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ ಮತ್ತು ಯಶಸ್ಸು ಸಾಧಿಸುತ್ತೀರಿ.

ಕನ್ಯಾ:ನೀವು ಅತ್ಯಂತ ಸ್ಫೂರ್ತಿಯುತವಾಗಿದ್ದೀರಿ. ನಿಮ್ಮ ಸೃಜನಶೀಲ ಪ್ರತಿಭೆಗಳು ಮತ್ತು ಸಾಮರ್ಥ್ಯಗಳು ನಿಮ್ಮ ಶ್ರೇಷ್ಠ ಕಲಾವಿದರಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತವೆ. ನೀವು ನಿಮ್ಮ ಸೃಜನಶೀಲತೆಗೆ ದಾರಿ ಮಾಡಿಕೊಟ್ಟರೆ ಮಾತುಗಳು ಸರಾಗವಾಗಿ ಹರಿದುಬರುತ್ತವೆ, ಮತ್ತು ನೀವು ಹಾಡಲು ಮತ್ತು ನೃತ್ಯ ಮಾಡಲು ಬಯಸಿದರೆ ಎಲ್ಲರ ಕೇಂದ್ರಬಿಂದುವಾಗುತ್ತೀರಿ. ನೀವು ಪ್ರದರ್ಶನ ಕಲೆಗಳು ಅಥವಾ ಬರಹವನ್ನು ಹವ್ಯಾಸಗಳಾಗಿ ಹೊಂದುವುದು ಸೂಕ್ತ.

ತುಲಾ:ಬಾಕಿ ಇರುವ ಯಾವುದೇ ಕಾನೂನು ಸಮಸ್ಯೆಗಳು ಇಂದು ನ್ಯಾಯಾಲಯದಲ್ಲಿ ಅಥವಾ ನ್ಯಾಯಾಲಯದ ಹೊರಗಡೆ ಪರಿಹಾರವಾಗಬಹುದು. ನಿಮ್ಮ ಕಾರ್ಯದೊತ್ತಡ ಇಂದು ಕಡಿಮೆಯಾಗಲಿದೆ, ಮತ್ತು ನೀವು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ದೂರ ಹೋಗಲು ಶಕ್ತರಾಗುತ್ತೀರಿ.

ವೃಶ್ಚಿಕ: ಇಂದು ನೀವು ನಿಮ್ಮ ಕೆಲಸದಲ್ಲಿ ಮುಳುಗಿಹೋಗುತ್ತೀರಿ. ಹಗಲಿನ ವೇಳೆ, ನೀವು ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲಿ ತುಂಬಿರುತ್ತೀರಿ. ಆದರೆ, ಸಂಜೆಗೆ ನಿಮ್ಮ ಕಥೆ ಬೇರೆಯದೇ ಆಗಿರುತ್ತದೆ. ಎಂದಿನಂತೆ ಉತ್ಸಾಹದಲ್ಲಿದ್ದು, ನಿಮ್ಮ ಮಿತ್ರರೊಂದಿಗೆ ಹೊರಗಡೆ ಹೋಗಿ ಆರಾಮವಾಗಿ ಕಾಲ ಕಳೆಯಿರಿ.

ಧನು:ಇಂದು ನಿಮ್ಮ ಹಡಗು ಪ್ರಚಂಡ ವಿವಾದದ ಅಲೆಗಳಿಗೆ ಸಿಲುಕಿಕೊಳ್ಳುತ್ತದೆ. ನೀವು ಮನಸ್ಸಿಗೆ ಬಂದಂತೆ ನಿಮಗೆ ಸಲಹೆ ನೀಡುವ ಜನರಿಂದ ದೂರ ಉಳಿಯುವುದು ಉತ್ತಮ. ಎಲ್ಲ ಅಂಶಗಳಿಗೂ ನೀವು ತಾಳ್ಮೆಯಿಂದ ಕಿವಿಗೊಟ್ಟರೆ ಚಂಡಮಾರುತ ತಣ್ಣಗಾಗುತ್ತದೆ ಮತ್ತು ಅವರ ಅಭಿಪ್ರಾಯಗಳನ್ನು ಸ್ವೀಕರಿಸಲು ಪ್ರಯತ್ನಿಸಿ.

ಮಕರ:ನೀವು ಹೆಚ್ಚುಕಾಲ ಅತಿಯಾದ ಭಾರದ ಕಾರ್ಯದೊತ್ತಡ ಸಹಿಸಲು ಸಾಧ್ಯವಿಲ್ಲ. ಅತ್ಯಂತ ಜಾಣ್ಮೆಯಿಂದ ನೀವು ನಿಮ್ಮ ಕೆಲಸಗಳನ್ನು ಪೂರೈಸುತ್ತೀರಿ ಮತ್ತು ನಿಧಾನವಾಗಿಯಾದರೂ ಸ್ಥಿರವಾಗಿ ನಿಮ್ಮ ಭಾರವನ್ನು ಭುಜಗಳಿಂದ ಕೆಳಗೆ ಇಳಿಸುತ್ತೀರಿ. ತಪ್ಪುಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡಲು ಎಚ್ಚರ ಮತ್ತು ಲಕ್ಷ್ಯ ನೀಡಿರಿ.

ಕುಂಭ: ಇಂದು ನೀವು ವಿದೇಶದಿಂದ ಕೆಲ ಶುಭಸುದ್ದಿಗಳನ್ನು ಪಡೆಯುತ್ತೀರಿ. ಈ ದಿನ ನಿಮಗೆ ಧನಾತ್ಮಕವಾಗಿರುತ್ತದೆ ಮತ್ತು ಇಡೀ ಇಪ್ಪತ್ನಾಲ್ಕು ಗಂಟೆಗಳೂ ಹಾಗೆಯೇ ಉಳಿಯುತ್ತದೆ. ನೀವು ಆನಂದಿಸುವ ಮನಸ್ಥಿತಿಯಲ್ಲಿದ್ದೀರಿ ಮತ್ತು ನಿಮ್ಮನ್ನು ಸೇರುವ ಪ್ರತಿಯೊಬ್ಬರೂ ನಿಮ್ಮೊಂದಿಗೆ ಆನಂದಿಸುತ್ತಾರೆ.

ಮೀನ: ಗ್ರಹಗಳು ಪರಿಪೂರ್ಣವಾಗಿ ಇರುವುದರಿಂದ ಕೆಲಸ ಮಾಡುವವರಿಗೆ ಈ ದಿನ ಅತ್ಯುತ್ತಮವಾಗಿದೆ. ಕಚೇರಿ/ಅಥವಾ ಕೆಲಸದಲ್ಲಿ ಇಂದು ನೀವು ಎಲ್ಲ ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸುತ್ತೀರಿ. ವಿದೇಶಗಳಲ್ಲಿ ಮತ್ತಷ್ಟು ಅಧ್ಯಯನಕ್ಕಾಗಿ ಎದುರು ನೋಡುತ್ತಿರುವವರು ಕೂಡಾ ಪ್ರಗತಿ ಕಾಣುತ್ತಾರೆ ಮತ್ತು ಅವರ ಕನಸುಗಳನ್ನು ಈಡೇರಿಸಿಕೊಳ್ಳಲು ಹತ್ತಿರವಾಗುತ್ತಾರೆ.

ABOUT THE AUTHOR

...view details