ಕರ್ನಾಟಕ

karnataka

ETV Bharat / bharat

ಹೊತ್ತಿ ಉರಿಯುತ್ತಿರುವ ಗಡಿ ಘರ್ಷಣೆಗೆ ಮತ್ತಷ್ಟು ತುಪ್ಪ ಸುರಿದ ಮಹಾ'ಮಂತ್ರಿ' - ಬೆಳಗಾವಿ ಗಡಿ ವಿವಾದ 2020

ಪ್ರತಿ ವರ್ಷದಂತೆ ಈ ಬಾರಿಯೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ. ಈ ನಡುವೆ ಗಡಿ ಪ್ರದೇಶಗಳಾದ ಬೆಳಗಾವಿ ಸೇರಿದಂತೆ ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲಿದ್ದೇವೆ ಎಂದು ಮಹಾರಾಷ್ಟ್ರದ ಮಂತ್ರಿ ಏಕನಾಥ್ ಶಿಂಧೆ ಗಡಿ ಪ್ರದೇಶಗಳ ಜನರಿಗೆ ಪತ್ರವೊಂದನ್ನು ಬರೆದಿದ್ದಾರೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ.

Trying to include disputed regions of Karnataka in Maharashtra: Ministers
ಮಹಾರಾಷ್ಟ್ರದ ಮಂತ್ರಿಗಳು (ಸಂಗ್ರಹ ಚಿತ್ರ)

By

Published : Oct 30, 2020, 6:51 PM IST

ಮುಂಬೈ:ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡಿದೆ. ಮಹಾರಾಷ್ಟ್ರದ ಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಚಗನ್ ಭುಜ್ಬಲ್​ ಅವರು ಎರಡು ರಾಜ್ಯಗಳ ಗಡಿಯಲ್ಲಿ ವಾಸಿಸುತ್ತಿರುವ ಜನರಿಗೆ ಪತ್ರ ಬರೆಯುವ ಮೂಲಕ ಹೊತ್ತಿ ಉರಿಯುತ್ತಿರುವ ಗಡಿ ಪ್ರದೇಶಗಳ ಘರ್ಷಣೆಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಮಹಾರಾಷ್ಟ್ರದ ಗಡಿ ಪ್ರದೇಶ ಬೆಳಗಾವಿಯನ್ನು ಸೇರಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪತ್ರ ಬರೆದಿರುವ ಮಹಾರಾಷ್ಟ್ರದ ಮಂತ್ರಿ ಏಕನಾಥ್ ಶಿಂಧೆ, ಇದು ಯಾವಾಗ ಸಂಭವಿಸುತ್ತದೆಯೋ ಆ ದಿನ ಅದು ಐತಿಹಾಸಿಕ ದಿನವಾಗಿರುತ್ತದೆ. ಆ ದಿನದವರೆಗೂ ನಾವು ನಿಮ್ಮೊಂದಿಗಿದ್ದೇವೆ. ಇದಕ್ಕಾಗಿ ಆರು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಈ ಹೋರಾಟಕ್ಕೆ ನಾವು ಶೀಘ್ರದಲ್ಲೇ ಇತಿಶ್ರೀ ಇಡಲಿದ್ದೇವೆ. ಈ ಮೂಲಕ ಗಡಿ ಪ್ರದೇಶಗಳಾದ ಬೆಳಗಾವಿ ಸೇರಿದಂತೆ ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರದೇಶದಲ್ಲಿನ ಹಲವು ಸಂಘಟನೆಗಳನ್ನು ನಾವು ನೋಡಿದ್ದೇವೆ. ನಮ್ಮ ಮರಾಠಿಗರ ತ್ಯಾಗವನ್ನು ನಾವು ಕಂಡಿದ್ದೇವೆ. ಹಾಗಾಗಿ ಮರಾಠಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯು ಶೀಘ್ರದಲ್ಲೇ ನಿಲ್ಲಲಿದೆ. ನಮ್ಮ ಸರ್ಕಾರ ಇವರಿಗೆ ನ್ಯಾಯ ಒದಗಿಸಲಿದೆ ಎಂದಿದ್ದಾರೆ.

ಕರ್ನಾಟಕದ ಭಾಗವಾಗಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್​, ​​ಭಾಲ್ಕಿ ಸೇರಿದಂತೆ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರ ತನ್ನದೆಂದು ಹೇಳಿಕೊಂಡಿದ್ದು, ಈ ಪ್ರದೇಶಗಳಲ್ಲಿ ಹೆಚ್ಚಿನ ಜನರು ಮರಾಠಿ ಮಾತನಾಡುವವರಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details