ಕರ್ನಾಟಕ

karnataka

By

Published : Feb 8, 2021, 11:39 AM IST

Updated : Feb 8, 2021, 12:24 PM IST

ETV Bharat / bharat

ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಸ್ಫೋಟ; ಕಾಶಿಯಲ್ಲಿ ವಿಶೇಷ ಪ್ರಾರ್ಥನೆ

ಗಂಗಾ ಆರತಿ ಪ್ರಾರಂಭವಾಗುವ ಮೊದಲು, ಸಂಕಲ್ಪದೊಂದಿಗೆ ತಾಯಿ ಗಂಗಾ ಅವರ ಸ್ವರೂಪವನ್ನು ಶಾಂತವಾಗಿಡಲು ಪ್ರಾರ್ಥಿಸಲಾಯಿತು. ಕಾಶಿಯ ದಶಾಶ್ವಮೇಧ ಘಾಟ್‌ನಲ್ಲಿ ಬಾಬಾ ವಿಶ್ವನಾಥ್ ಮತ್ತು ಮಾ ಗಂಗಾ ಅವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಸ್ಫೋಟ
ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಸ್ಫೋಟ

ವಾರಣಾಸಿ:ಭಾನುವಾರ ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಸ್ಫೋಟದಿಂದ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಶಿಯ ದಶಾಶ್ವಮೇಧ ಘಾಟ್‌ನಲ್ಲಿ ಬಾಬಾ ವಿಶ್ವನಾಥ್ ಮತ್ತು ಮಾ ಗಂಗಾ ಅವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಾಶಿಯಲ್ಲಿ ವಿಶೇಷ ಪ್ರಾರ್ಥನೆ

ಗಂಗಾ ಆರತಿ ಪ್ರಾರಂಭವಾಗುವ ಮೊದಲು, ಸಂಕಲ್ಪದೊಂದಿಗೆ ತಾಯಿ ಗಂಗಾ ಅವರ ಸ್ವರೂಪವನ್ನು ಶಾಂತವಾಗಿಡಲು ಪ್ರಾರ್ಥಿಸಲಾಯಿತು. ನಂತರ, ದುರಂತದಲ್ಲಿ ಘಟನೆಯಲ್ಲಿ ಮಡಿವರ ಆತ್ಮಕ್ಕೆ ಶಾಂತಿ ಸಿಗಲೆಂದು ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.

ಇದನ್ನೂ ಓದಿ:2022 ರ ಏಪ್ರಿಲ್ ವೇಳೆಗೆ ಎಲ್ಲಾ ರಫೇಲ್​ ವಿಮಾನಗಳು ಭಾರತಕ್ಕೆ ಆಗಮನ: ರಾಜನಾಥ್ ಸಿಂಗ್

ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಒಡೆದ ಕಾರಣ ಈವರೆಗೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ದುರಂತದ ದೃಷ್ಟಿಯಿಂದ, ಗಂಗಾ ನದಿಯ ಎಲ್ಲ ಸ್ಥಳಗಳಲ್ಲಿ ಎಚ್ಚರಿಕೆ ನೀಡಲಾಗಿದೆ.

Last Updated : Feb 8, 2021, 12:24 PM IST

ABOUT THE AUTHOR

...view details