ಕರ್ನಾಟಕ

karnataka

ETV Bharat / bharat

ಕಾರ್ತಿಕ್​​ನಿಂದಾಗೇ ಟೀಂ ಇಂಡಿಯಾದಿಂದ ಹೊರಬಿದ್ದೆ  ಶ್ರೀಶಾಂತ್ ಅಳಲು: ದಿನೇಶ್ ತಿರುಗೇಟು​! - ​​2013ರ ಚಾಂಪಿಯನ್​ ಟ್ರೋಫಿ

ಇಷ್ಟು ದಿನ ಭಾರತೀಯ ಕ್ರಿಕೆಟ್​ ಮಂಡಳಿ ವಿರುದ್ಧ ಹರಿಹಾಯುತ್ತಿದ್ದ ವಿವಾದಿತ ಕ್ರಿಕೆಟಿಗ ಎಸ್​ ಶ್ರೀಶಾಂತ್​ ಇದೀಗ ಟೀಂ ಇಂಡಿಯಾ ವಿಕೆಟ್​ ಕೀಪರ್​ ದಿನೇಶ್ ಕಾರ್ತಿಕ್​ ವಿರುದ್ಧ ಹರಿಹಾಯ್ದಿದ್ದಾರೆ.

ಕಾರ್ತಿಕ್​,ಶ್ರೀಶಾಂತ್​​

By

Published : Oct 22, 2019, 8:30 PM IST

ನವದೆಹಲಿ:ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಲ್ಲಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಎಸ್​ ಶ್ರೀಶಾಂತ್​, ಕಳೆದ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ವಿಕೆಟ್​ ಕೀಪರ್​ ವಿರುದ್ಧ ಹರಿಹಾಯ್ದಿದ್ದರು. ಇದೀಗ ಆ ಹೇಳಿಕೆಗೆ ಕಾರ್ತಿಕ್​ ತಿರುಗೇಟು ನೀಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿವಾಹಿನಿವೊಂದರಲ್ಲಿ ಭಾಗಿಯಾಗಿದ್ದ ಎಸ್​ ಶ್ರೀಶಾಂತ್​, ತಾವು ಟೀಂ ಇಂಡಿಯಾ ಕ್ರಿಕೆಟ್​ ತಂಡದಿಂದ ಹೊರಬಿಳಲು ದಿನೇಶ್​ ಕಾರ್ತಿಕ್​ ಕಾರಣ ಎಂದು ಹೇಳಿಕೆ ನೀಡಿದ್ದರು. ಸದ್ಯ ಪ್ರತಿಕ್ರಿಯೆ ನೀಡಿರುವ ಕಾರ್ತಿಕ್​, ಹೌದು ನಾನು ಅವರ ಹೇಳಿಕೆ ಬಗ್ಗೆ ಕೇಳಿದ್ದೇನೆ. ಆದರೆ, ಆ ರೀತಿಯ ಹೇಳಿಕೆಗಳಿಗೆ ನಾನು ಇದೀಗ ಪ್ರತಿಕ್ರಿಯೆ ನೀಡಿದ್ರೆ ಸಣ್ಣವನಾಗುತ್ತೇನೆ ಎಂದು ಹೇಳಿದ್ದಾರೆ.

ಶ್ರೀಶಾಂತ್​ ಹೇಳಿದ್ದೇನು?:ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್​ ಶ್ರೀನಿವಾಸ್​ ಅವರನ್ನ ನಿಂದಿಸಿದ ಬಗ್ಗೆ ದೂರು ನೀಡಿದ್ದರು. ಹೀಗಾಗಿ ​​2013ರ ಚಾಂಪಿಯನ್​ ಟ್ರೋಪಿ ವೇಳೆ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಸದ್ಯ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದಿನೇಶ್​ ಅಂತಹ ವಿಷಯಗಳಿಗೆ ಪ್ರತಿಕ್ರಿಯೆ ನೀಡಿದ್ರೆ ತಾವು ಸಣ್ಣವನಾಗುವೆ ಎಂದಿದ್ದಾರೆ.

2013ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗಿದ್ದ ಎಸ್​ ಶ್ರೀಶಾಂತ್​ ಸ್ಪಾಟ್​ ಫಿಕ್ಸಿಂಗ್​​ನಲ್ಲಿ ಭಾಗಿಯಾಗಿದ್ದಕ್ಕಾಗಿ 7 ವರ್ಷಗಳ ಕಾಲ ಸುಪ್ರೀಂಕೋರ್ಟ್​ನಿಂದ ನಿಷೇಧಕ್ಕೊಳಗಾಗಿದ್ದಾರೆ.

ABOUT THE AUTHOR

...view details