ಕರ್ನಾಟಕ

karnataka

ETV Bharat / bharat

ನಮ್ಮ ಹುತಾತ್ಮ ಸೈನಿಕರು ಮತ್ತು ಸಶಸ್ತ್ರ ಪಡೆಗಳ ಜೊತೆ ನಿಲ್ಲುವ ಸಮಯ: ಆನಂದ್ ಮಹೀಂದ್ರಾ - ಭಾರತ-ಚೀನಾ ಸಂಘರ್ಷ

ನಾವು ನಮ್ಮ ಹುತಾತ್ಮ ಸೈನಿಕರ ಕುಟುಂಬಗಳೊಂದಿಗೆ ದುಃಖಿಸಬೇಕು ಮತ್ತು ನಿಲ್ಲಬೇಕು. ನಮ್ಮ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ದೃಢವಾಗಿ ನಿಲ್ಲಬೇಕು ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್​ ಮಾಡಿದ್ದಾರೆ.

ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ

By

Published : Jun 16, 2020, 6:28 PM IST

ನವದೆಹಲಿ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನಾಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾದ ಘಟನೆಯ ಬಗ್ಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ

ಈ ಕುರಿತು ‘ಲಡಾಖ್​ನಲ್ಲಿ ಏನಾಯಿತು ಎಂಬುದರ ವಿವರಗಳನ್ನು ನಾವು ಅಂತಿಮವಾಗಿ ತಿಳಿಯುತ್ತೇವೆ. ಅದು ನಮ್ಮ ಹಕ್ಕು. ಆದರೆ ಇದೀಗ, ನಾವು ನಮ್ಮ ಹುತಾತ್ಮ ಸೈನಿಕರ ಕುಟುಂಬಗಳೊಂದಿಗೆ ದುಃಖಿಸಬೇಕು ಮತ್ತು ನಿಲ್ಲಬೇಕು. ನಮ್ಮ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ದೃಢವಾಗಿ ನಿಲ್ಲಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ಓದಿ:ಹಿಂಸಾತ್ಮಕ ರೂಪ ಪಡೆದ ಭಾರತ-ಚೀನಾ ಸಂಘರ್ಷ: ಮೂವರು ಯೋಧರು ಹುತಾತ್ಮ

ಚೀನಾದ ಸೈನ್ಯದೊಂದಿಗಿನ ಹಿಂಸಾತ್ಮಕ ಮುಖಾಮುಖಿಯಲ್ಲಿ ಸೋಮವಾರ ರಾತ್ರಿ ಭಾರತೀಯ ಸೇನಾಧಿಕಾರಿ ಮತ್ತು ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

ABOUT THE AUTHOR

...view details