ಕರ್ನಾಟಕ

karnataka

ETV Bharat / bharat

ಗುಜರಿ ಅಂಗಡಿಗೆ ಬೆಂಕಿ; ಮಗು ಸೇರಿ ಮೂವರು ಸಜೀವ ದಹನ - ಗುಜರಿ ಅಂಗಡಿಯಲ್ಲಿ ಬೆಂಕಿ

ಗುಜರಿ ಅಂಗಡಿಗೆ ಬೆಂಕಿ ಹೊತ್ತಿಕೊಂಡು ಅದರೊಳಗಿದ್ದ ಮೂವರು ಮೃತಪಟ್ಟಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

Three killed in fire at scrap shop in west Delhi
ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ

By

Published : Jan 15, 2021, 2:36 PM IST

ನವದೆಹಲಿ: ಪಶ್ಚಿಮ ದೆಹಲಿಯ ಕೀರ್ತಿ ನಗರ ಪ್ರದೇಶದ ಗುಜರಿ ಅಂಗಡಿಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ 10:50 ರ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಏಳು ವಾಹನಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಅಂಗಡಿಯೊಳಗಿದ್ದ ಮೂವರೂ ಸಂಪೂರ್ಣ ಸುಟ್ಟುಹೋಗಿದ್ದರು.

ಇದನ್ನೂ ಓದಿ: ಮಗುವನ್ನೂ ಲೆಕ್ಕಿಸದೆ ಮನೆಗೆ ಬೆಂಕಿ ಹಚ್ಚಿದ ಕುಡುಕ...!

ಮೃತರಲ್ಲಿ ಒಬ್ಬನನ್ನು ಕೀರ್ತಿ ನಗರದ ಕಮಲಾ ನೆಹರೂ ಕ್ಯಾಂಪ್ ನಿವಾಸಿ ರೋಹಿತ್ (20) ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ ದೆಹಲಿ) ದೀಪಕ್ ಪುರೋಹಿತ್ ಹೇಳಿದ್ದಾರೆ.

ABOUT THE AUTHOR

...view details