ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಜೂನ್ ಅಂತ್ಯದ ವೇಳೆಗೆ ವಿಸ್ತರಣೆ ಆಗಲಿದ್ದು, ಜೆಡಿಯುನ ಮೂವರು ನಾಯಕರು ಕ್ಯಾಬಿನೆಟ್ ಸೇರಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಜನತಾದಳ (ಯುನೈಟೆಡ್) ನಾಯಕರಾದ ಲಲನ್ ಸಿಂಗ್, ರಾಮ್ ನಾಥ್ ಠಾಕೂರ್ ಮತ್ತು ಚಂದ್ರಶೇಖರ್ ಚಂದ್ರವಂಶಿ ಅವರನ್ನು ಮೋದಿ ಅವರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಲಲನ್ ಸಿಂಗ್ ಅವರು ಕ್ಯಾಬಿನೆಟ್ ಸಚಿವ ಸ್ಥಾನವನ್ನು ಪಡೆಯುವ ಸಾಧ್ಯತೆಯಿದ್ದರೆ, ಠಾಕೂರ್ ಮತ್ತು ಚಂದ್ರವಂಶಿ ಕೇಂದ್ರ ರಾಜ್ಯ ಸಚಿವರಾಗಬಹುದು ಎನ್ನಲಾಗಿದೆ.