ಕರ್ನಾಟಕ

karnataka

ಪಶು ವೈದ್ಯೆ ಅತ್ಯಾಚಾರಿಗಳ ಎನ್​ಕೌಂಟರ್ ಹಿಂದಿದ್ದಾರೆ ಹುಬ್ಬಳ್ಳಿ ಮೂಲದ ಖಡಕ್​ ಅಧಿಕಾರಿ

By

Published : Dec 6, 2019, 8:12 AM IST

Updated : Dec 6, 2019, 10:30 AM IST

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪಶು ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ.

ಪೊಲೀಸ್​ ಕಮಿಷನರ್​ ಸಿ.ಪಿ. ಸಜ್ಜನರ್
ಪೊಲೀಸ್​ ಕಮಿಷನರ್​ ಸಿ.ಪಿ. ಸಜ್ಜನರ್

ಹೈದರಾಬಾದ್​: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪಶು ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ.

ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ ಸ್ಥಳ

ಟ್ವಿಟರ್​ನಲ್ಲಿ ಈ ವಿಷಯ ಟಾಪ್​ ಟ್ರೆಂಡಿಂಗ್​ನಲ್ಲಿದ್ದು, ಎನ್​ಕೌಂಟರ್​ ಹಿಂದಿನ ಅಧಿಕಾರಿ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸೈಬರಾಬಾದ್​ ಪೊಲೀಸ್​ ಕಮಿಷನರ್​ ವಿಶ್ವನಾಥ್​ ಸಜ್ಜನರ್​ ಅವರು ಈ ಎನ್​ಕೌಂಟರ್​ ಹಿಂದಿನ ವ್ಯಕ್ತಿ ಎಂದೇ ಹೇಳಲಾಗುತ್ತಿದೆ.

ದೇಶಾದ್ಯಂತ ವೈದ್ಯೆ ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ ಕಾವು ಹೆಚ್ಚಾಗಿತ್ತು, ಆರೋಪಿಗಳನ್ನು ತಕ್ಷಣವೇ ಗಲ್ಲಿಗೇರಿಸುವಂತೆ ಒತ್ತಾಯ ಕೇಳಿಬರುತ್ತಿತ್ತು. ತೆಲಂಗಾಣ ಸರ್ಕಾರದ ಮೇಲೆ ಒತ್ತಡ ಕೂಡ ಹೆಚ್ಚಾಗಿತ್ತು. ಇದಕ್ಕೆ ಪೂರಕ ಎಂಬಂತೆ ಪ್ರಕರಣದ ವಿಚಾರಣೆಗಾಗಿ ಆರೋಪಿಗಳನ್ನು ಹತ್ಯೆ ನಡೆದ ಜಾಗಕ್ಕೆ ಕರೆದೊಯ್ಯಲಾಗಿತ್ತು.

ಎನ್​ಕೌಂಟರ್ ಮಾಡಿದ ಕಮಿಷನರ್​ ವಿಶ್ವನಾಥ್​ ಸಜ್ಜನರ್​ ಅವರಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

Last Updated : Dec 6, 2019, 10:30 AM IST

ABOUT THE AUTHOR

...view details