ಕರ್ನಾಟಕ

karnataka

ETV Bharat / bharat

ಇನ್ಮುಂದೆ ಸುತ್ತಿ ಬಳಸಿ ಹೋಗ್ಬೇಕಿಲ್ಲ... ವಾಯು ಮಾರ್ಗಗಳ ಮೇಲಿನ ನಿರ್ಬಂಧ ಹಿಂಪಡೆದ ಭಾರತೀಯ ವಾಯುಪಡೆ - undefined

ಬಾಲಾಕೋಟ್​ ಮೇಲಿನ ಏರ್​ಸ್ಟ್ರೈಕ್​ ನಂತರ ಭಾರತದ ಎಲ್ಲ ವಾಯು ಮಾರ್ಗಗಳ ಮೇಲೆ ವಾಯುಸೇನೆ ಹೇರಿದ್ದ ನಿರ್ಬಂಧಗಳನ್ನ ತೆಗೆದುಹಾಕಿದೆ.

ನಿರ್ಬಂಧ ಹಿಂಪಡೆದ ಭಾರತೀಯ ವಾಯುಪಡೆ

By

Published : Jun 1, 2019, 12:21 PM IST

ನವದೆಹಲಿ: ವಾಯು ಮಾರ್ಗಗಳ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

ಪಾಕಿಸ್ತಾನದ ಬಾಲಾಕೋಟ್​ ಮೇಲೆ ಭಾರತೀಯ ವಾಯುಸೇನೆ ಏರಸ್ಟ್ರೈಕ್​ ನಡೆಸಿದ ನಂತರ ಫೆಬ್ರವರಿ 27 ರಿಂದ ದೇಶದ ವಾಯು ಮಾರ್ಗಗಳ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ನರೇಂದ್ರ ಮೋದಿ ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ.

ಈ ನಿರ್ಬಂಧದಿಂದ ಅಮೆರಿಕ ಮತ್ತು ಯುರೋಪ್​ನಿಂದ ನವದೆಹಲಿಗೆ ಬರುವ ವಿಮಾನಗಳಿಗೆ ಭಾರೀ ತೊಂದರೆ ಉಂಟಾಗಿತ್ತು. ಪಾಕಿಸ್ತಾನ ಇಂಟರ್​ನ್ಯಾಷನಲ್​​ ಏರ್​​​ಲೈನ್ಸ್​​​​ ಕೂಡ ವಾರಕ್ಕೆ ಒಂದು ಬಾರಿ ಕೌಲಾಲಂಪುರ್, ಬ್ಯಾಂಕಾಕ್​ ಮತ್ತು ನವದೆಹಲಿಗೆ ಹೋಗುತ್ತಿದ್ದ ವಿಮಾನಗಳ ಹಾರಾಟವನ್ನ ನಿರ್ಬಂಧಿಸಿತ್ತು.

ಇದೀಗ ಭಾರತೀಯ ವಾಯುಸೇನೆ ಹೇರಿದ್ದ ನಿರ್ಬಂಧವನ್ನ ಹಿಂಪಡೆದಿದ್ದು, ಈ ಹಿಂದೆ ಫೆಬ್ರವರಿ27ಕ್ಕೂ ಮೊದಲಿನಂತೆ ಇದ್ದ ವಾಯು ಮಾರ್ಗಗಳ ಮೂಲಕ ವಿಮಾನಗಳು ಪ್ರಯಾಣ ಬೆಳಸಲಿವೆ.

For All Latest Updates

TAGGED:

ABOUT THE AUTHOR

...view details