ಕರ್ನಾಟಕ

karnataka

ಎನ್​ಕೌಂಟರ್​ ಅಲ್ಲ, ಆತ್ಮರಕ್ಷಣೆಗಾಗಿ ಶೂಟೌಟ್​ ಮಾಡಿದ್ವಿ: ಘಟನೆಯನ್ನು ಕನ್ನಡದಲ್ಲೂ ವಿವರಿಸಿದ ಸಜ್ಜನರ​

By

Published : Dec 6, 2019, 4:40 PM IST

Updated : Dec 6, 2019, 5:11 PM IST

ಇಡೀ ದೇಶದ ಜನರ ಆಕ್ರೋಶಕ್ಕೆ ಕಾರಣವಾದ ಹೈದರಾಬಾದ್‌ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅತ್ಯಂತ ಅಮಾನುಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಮೇಲೆ ನಡೆದಿರುವ ಎನ್​ಕೌಂಟರ್​ ಕುರಿತು ಸೈಬರಾಬಾದ್ ಪೊಲೀಸ್​ ಆಯುಕ್ತ ವಿಶ್ವನಾಥ್​​ ಸಜ್ಜನರ ಸಂಪೂರ್ಣ​ ಮಾಹಿತಿ ನೀಡಿದ್ರು.

Telangana Police briefs the media
ಸುದ್ದಿಗೋಷ್ಠಿಯಲ್ಲಿ ಸಜ್ಜನವರ್​

ಹೈದರಾಬಾದ್​: ಪಶುವೈದ್ಯೆ ದಿಶಾ ಮೇಲಿನ ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸ್​ ಆಯುಕ್ತ​​ ವಿಶ್ವನಾಥ್​ ಸಜ್ಜನರ ಸುದ್ದಿಗೋಷ್ಟಿಯಲ್ಲಿ​​ ಮಾಹಿತಿ ನೀಡಿದರು.
ಆರೋಪಿಗಳನ್ನು ಇಂದು ಬೆಳಗ್ಗೆ 3.30ಕ್ಕೆ ಹೆಚ್ಚಿನ ತನಿಖೆ ಹಾಗೂ ಸ್ಥಳ ಮಹಜರು​ ಮಾಡಲು ಘಟನಾ ಸ್ಥಳಕ್ಕೆ ಪೊಲೀಸ್‌ ಭದ್ರತೆಯಲ್ಲಿ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಆರೋಪಿಗಳು ಪಿಸ್ತೂಲ್​ ಕಸಿದುಕೊಂಡು ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದರು. ಈ ವೇಳೆ ಶರಣಾಗುವಂತೆ​ ನಮ್ಮ ಪೊಲೀಸರು ಕೇಳಿಕೊಂಡ್ರೂ ಅವರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ರು. ಹೀಗಾಗಿ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಶೂಟೌಟ್ ಮಾಡಿದ್ದೇವೆ ಎಂದು ಸಜ್ಜನರ ಘಟನೆಯನ್ನು ವಿವರಿಸುತ್ತಾ ಹೋದರು.

ಸುದ್ದಿಗೋಷ್ಠಿಯಲ್ಲಿ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ​ ಮಾತು

ಘಟನೆ ವೇಳೆ ನಮ್ಮ ಇಬ್ಬರು ಪೊಲೀಸರಿಗೆ ಗಾಯಗಳಾಗಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಈ ಆರೋಪಿಗಳು ಕರ್ನಾಟಕ ಸೇರಿದಂತೆ ಆಂಧ್ರ, ತೆಲಂಗಾಣದಲ್ಲೂ ನಡೆದಿರುವ ಅನೇಕ ಘಟನೆಗಳಲ್ಲಿ ಭಾಗಿಯಾಗಿರುವ ಸಂಶಯವಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ರು.

ನವೆಂಬರ್​ 26 ರಂದು ಪಶುವೈದ್ಯೆ ದಿಶಾ ಅವರನ್ನು ಅಪಹರಿಸಿದ ನಾಲ್ವರು ದುಷ್ಟರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಪೆಟ್ರೋಲ್‌ ಮತ್ತು ಡೀಸೆಲ್‌ ಸುರಿದು ಶವವನ್ನು ಸುಟ್ಟು ಹಾಕಿದ್ದರು. ಬಂಧಿತ ಆರೋಪಿಗಳಾದ ಮಹಮ್ಮದ್ ಅರಿಫ್, ಚನ್ನಕೇಶವಲು, ಜೊಲ್ಲು ನವೀನ್, ಜೊಲ್ಲು ಶಿವನನ್ನು ಚರ್ಲಪಲ್ಲಿ ಜೈಲಿನಲ್ಲಿ ಇಡಲಾಗಿತ್ತು. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಹಾಗೂ ದಿಶಾ ಅವರ ಮೊಬೈಲ್ ಫೋನ್, ಇತರೇ ವಸ್ತುಗಳನ್ನು ವಶಕ್ಕೆ ಪಡೆಯಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆತರಲಾಗಿತ್ತು ಎಂದು ತಿಳಿಸಿದ್ರು.

Last Updated : Dec 6, 2019, 5:11 PM IST

ABOUT THE AUTHOR

...view details