ಕರ್ನಾಟಕ

karnataka

ETV Bharat / bharat

ಭಾರತ್ ಬಯೋಟೆಕ್ ಕ್ಯಾಂಪಸ್​ಗೆ ತೆಲಂಗಾಣ ಗವರ್ನರ್ ಭೇಟಿ: ಕೋವಿಡ್​ ಲಸಿಕೆ ಕುರಿತು ಹೇಳಿದ್ದೇನು? - ಭಾರತ್ ಬಯೋಟೆಕ್ ಕ್ಯಾಂಪಸ್

ಕೊರೊನಾ ಸೋಂಕಿಗೆ ಲಸಿಕೆ ಸಿದ್ಧಪಡಿಸುತ್ತಿರುವ ಭಾರತ್ ಬಯೋಟೆಕ್ ಕ್ಯಾಂಪಸ್​ಗೆ ಭೇಟಿ ನೀಡಿದ ತೆಲಂಗಾಣ ಗವರ್ನರ್​ ಡಾ. ತಮಿಳಿಸೈ ಸೌಂದರ್​ರಾಜನ್, ಕೊರೊನಾ ಸೋಂಕಿಗೆ ಪರಿಣಾಮಕಾರಿ ಲಸಿಕೆಗಾಗಿ ಇಡೀ ಪ್ರಪಂಚವೇ ಹೈದರಾಬಾದ್​ನತ್ತ ನೋಡುತ್ತಿದೆ ಎಂದಿದ್ದಾರೆ.

Telangana Guv visits Bharat Biotech Centre in Hyderabad
ಭಾರತ್ ಬಯೋಟೆಕ್ ಕ್ಯಾಂಪಸ್​ಗೆ ತೆಲಂಗಾಣ ಗವರ್ನರ್ ಭೇಟಿ

By

Published : Sep 30, 2020, 6:58 AM IST

ಹೈದರಾಬಾದ್:ಕೊರೊನಾ ಸೋಂಕಿಗೆ ಲಸಿಕೆ ಸಿದ್ಧಪಡಿಸುತ್ತಿರುವ ಭಾರತ್ ಬಯೋಟೆಕ್ ಕ್ಯಾಂಪಸ್​ಗೆ ತೆಲಂಗಾಣ ಗವರ್ನರ್​ ಡಾ. ತಮಿಳಿಸೈ ಸೌಂದರ್​ರಾಜನ್ ಭೇಟಿ ನೀಡಿದ್ದಾರೆ.

ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ಸಂಶೋಧಕರು ದಣಿವಿಲ್ಲದಂತೆ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದ ರಾಜ್ಯಪಾಲರು, 2020ರ ಅಂತ್ಯದ ವೇಳೆಗೆ ಲಸಿಕೆ ಬಿಡುಗಡೆಯಾಗುವ ಆಶಯ ವ್ಯಕ್ತಪಡಿಸಿದ್ದಾರೆ.

ಭೇಟಿ ವೇಳೆ ಮಾತನಾಡಿದ ಗವರ್ನರ್​​, ಕೊರೊನಾ ಸೋಂಕಿಗೆ ಪರಿಣಾಮಕಾರಿ ಲಸಿಕೆಗಾಗಿ ಇಡೀ ಪ್ರಪಂಚವೇ ಹೈದರಾಬಾದ್​ನತ್ತ ನೋಡುತ್ತಿದೆ ಎಂದಿದ್ದಾರೆ.

ಸೋಂಕಿಗೆ ತುತ್ತಾಗುತ್ತಿರುವ ಅನೇಕ ಪ್ರಮುಖ ನಾಯಕರು, ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ರಾಜ್ಯಪಾಲರು, ಕೋವಿಡ್ -19 ಕಾರಣದಿಂದಾಗಿ ಮಾನವಕುಲದ ಸಂಕಷ್ಟವನ್ನು ಕೊನೆಗೊಳಿಸಲು ವರ್ಷದ ಅಂತ್ಯದ ವೇಳೆಗೆ ಪರಿಣಾಮಕಾರಿ ಲಸಿಕೆ ನೀಡುವಂತೆ ಕೇಳಿಕೊಂಡಿದ್ದಾರೆ.

ಕೋವಿಡ್ -19 ಲಸಿಕೆ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ತೊಡಗಿರುವ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿದ ಗವರ್ನರ್​, ಕೋವಿಡ್-19ಗೆ ಲಸಿಕೆ ಸಿದ್ಧಪಡಿಸಲು ಎಲ್ಲಾ ವಿಜ್ಞಾನಿಗಳು ಮತ್ತು ಇತರ ಸಂಶೋಧಕರು ಪಟ್ಟು ಹಿಡಿದು ಮಾಡುತ್ತಿರುವ ಕೆಲಸಕ್ಕಾಗಿ ನಾನು ನಮಸ್ಕರಿಸುತ್ತೇನೆ. ತೆಲಂಗಾಣ ಅಥವಾ ಭಾರತ ಮಾತ್ರವಲ್ಲ, ನಮ್ಮ ವಿಜ್ಞಾನಿಗಳು ಕೋವಿಡ್-19ಗೆ ಪರಿಣಾಮಕಾರಿ, ಕೈಗೆಟುಕುವ ಮತ್ತು ಸುರಕ್ಷಿತ ಲಸಿಕೆಯನ್ನು ಹೊರ ತರುತ್ತಾರೆ ಎಂದು ಇಡೀ ಜಗತ್ತು ಆಶಿಸುತ್ತಿದೆ ಎಂದಿದ್ದಾರೆ.

ABOUT THE AUTHOR

...view details