ಸಿಕಂದರಾಬಾದ್(ತೆಲಂಗಾಣ):ಶ್ವಾಸಕೋಶದ ಉರಿಯೂತದಿಂದ ಬಳಲುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಯಶೋದಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.
ತೆಲಂಗಾಣ ಸಿಎಂಗೆ ಶ್ವಾಸಕೋಶದ ನೋವು, ಉರಿಯೂತದ ಬಾಧೆ; ಆಸ್ಪತ್ರೆಯಲ್ಲಿ ತಪಾಸಣೆ - ಆಸ್ಪತ್ರೆಯಲ್ಲಿ ಕೆಸಿಆರ್ಗೆ ವೈದ್ಯಕೀಯ ತಪಾಸಣೆ
ಸಿಕಂದರಾಬಾದ್ನಲ್ಲಿನ ಯಶೋದಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಶ್ವಾಸಕೋಶದ ಉರಿಯೂತದಿಂದ ಬಳಲುತ್ತಿದ್ದಾರೆ.
![ತೆಲಂಗಾಣ ಸಿಎಂಗೆ ಶ್ವಾಸಕೋಶದ ನೋವು, ಉರಿಯೂತದ ಬಾಧೆ; ಆಸ್ಪತ್ರೆಯಲ್ಲಿ ತಪಾಸಣೆ Telangana CM KCR](https://etvbharatimages.akamaized.net/etvbharat/prod-images/768-512-10153884-676-10153884-1610018809766.jpg)
Telangana CM KCR
ಸಿಎಂ ಅವರ ಖಾಸಗಿ ವೈದ್ಯ ಎಂ.ವಿ ರಾವ್.ನವನೀತ್ ಸಾಗರ್ ಹಾಗೂ ಹೃದಯರೋಗ ತಜ್ಞ ಡಾ.ಪ್ರಮೋದ್ ಕುಮಾರ್ ವೈದ್ಯಕೀಯ ತಪಾಸಣೆ ನಡೆಸಿದ್ದು, ಈ ವೇಳೆ ಶ್ವಾಸಕೋಶದಲ್ಲಿ ನೋವು ಮತ್ತು ಉರಿಯೂತದಿಂದ ಬಳಲುತ್ತಿರುವುದು ತಿಳಿದು ಬಂದಿದೆ.
ಇದೀಗ ಅವರಿಗೆ ಎಂಆರ್ಐ, ಸಿಟಿ ಸ್ಕ್ಯಾನ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಮಗಳು ಕವಿತಾ ಹಾಗೂ ಸಂತೋಷ್ ಕುಮಾರ್ ಸಿಎಂ ಜೊತೆಗಿದ್ದರು. ಈ ಪರೀಕ್ಷೆಗಳ ವರದಿ ಮುಂದಿನ ಮೂರು ದಿನಗಳಲ್ಲಿ ಬರುವ ಸಾಧ್ಯತೆ ಇದೆ.