ಕರ್ನಾಟಕ

karnataka

ETV Bharat / bharat

ಹುತಾತ್ಮ ಕರ್ನಲ್​ ಸಂತೋಷ್​ ಬಾಬು ಮನೆಗೆ ಕೆಸಿಆರ್ ಭೇಟಿ... 5 ಕೋಟಿ ರೂ. ಚೆಕ್​​ ವಿತರಿಸಿದ ಸಿಎಂ! - ಹುತಾತ್ಮ ಕರ್ನಲ್​ ಸಂತೋಷ್ ಬಾಬು

ಹುತಾತ್ಮ ಕರ್ನಲ್​ ಸಂತೋಷ್​ ಬಾಬು ಮನೆಗೆ ತೆರಳಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​​ 5 ಕೋಟಿ ರೂ.ಗಳ ಚೆಕ್​ ವಿತರಣೆ ಮಾಡಿ, ಕುಟುಂಬಕ್ಕೆ ಧೈರ್ಯ ತುಂಬಿದರು.

Telangana CM K Chandrasekhar Rao
Telangana CM K Chandrasekhar Rao

By

Published : Jun 22, 2020, 5:16 PM IST

ತೆಲಂಗಾಣ:ಪೂರ್ವ ಲಡಾಖ್​ನಲ್ಲಿ ಚೀನಾ ಯೋಧರ ದಾಳಿಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಮನೆಗೆ ಇಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಭೇಟಿ ನೀಡಿದರು.

ಹುತಾತ್ಮ ಕರ್ನಲ್​ ಸಂತೋಷ್​ ಬಾಬು ಮನೆಗೆ ಕೆಸಿಆರ್ ಭೇಟಿ

ಕಳೆದ ಕೆಲ ದಿನಗಳ ಹಿಂದೆ ಹುತಾತ್ಮ ಯೋಧ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ರೂ. ಪರಿಹಾರ ನೀಡಲಾಗುತ್ತಿದ್ದು, ಉಳಿದ ಯೋಧರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಘೋಷಿಸಿದ್ದರು. ಜತೆಗೆ ಸಂತೋಷ್ ಬಾಬು ಅವರ ಕುಟುಂಬಕ್ಕೆ ನಿವಾಸ ಹಾಗೂ ಸಂತೋಷ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದು, ಹುತಾತ್ಮ ಯೋಧನ ಮನೆಗೆ ಸ್ವತಃ ತೆರಳಿ ಪರಿಹಾರ ನೀಡುವುದಾಗಿ ತಿಳಿಸಿದ್ದರು.

ಹುತಾತ್ಮ ಕರ್ನಲ್​​ ಸಂತೋಷ್​ ಕುಟುಂಬಕ್ಕೆ 5 ಕೋಟಿ ರೂ. ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

ಅದರಂತೆ ಇಂದು ಸೂರ್ಯಪೇಟ್​​ನಲ್ಲಿರುವ ಅವರ ಮನೆಗೆ ತೆರಳಿದ ಸಿಎಂ, ಕೆಲ ಹೊತ್ತು ಕುಟುಂಬಸ್ಥರೊಂದಿಗೆ ಮಾತನಾಡಿದ್ದು, 5 ಕೋಟಿ ರೂ.ಗಳ ಚೆಕ್​, ಪ್ಲ್ಯಾಟ್​ ಹಾಗೂ ಸರ್ಕಾರಿ ಉದ್ಯೋಗದ ಪತ್ರ ನೀಡಿದರು. ಕಳೆದ ಸೋಮವಾರ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ ಭಾರತೀಯ 20 ಯೋಧರು ಹುತಾತ್ಮರಾಗಿದ್ದು, ಅದರಲ್ಲಿ ತೆಲಂಗಾಣದ ಕರ್ನಲ್​ ಕೂಡ ಹುತಾತ್ಮರಾಗಿದ್ದರು.

ABOUT THE AUTHOR

...view details