ಕರ್ನಾಟಕ

karnataka

By

Published : May 4, 2020, 5:33 PM IST

ETV Bharat / bharat

50 ರೈಲುಗಳಲ್ಲಿ ಬರುವ ವಲಸಿಗರ ಶುಲ್ಕ ಪಾವತಿಗೆ ಸಿದ್ಧ:  ತೇಜಸ್ವಿ ಯಾದವ್ ಘೋಷಣೆ

ಬಿಹಾರಿ ವಲಸಿಗರನ್ನು ಮರಳಿ ಕರೆತರಲು, ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಅವರು ಸೋಮವಾರ 50 ರೈಲುಗಳ ಪ್ರಯಾಣಿಕರ ಸಂಪೂರ್ಣ ಟಿಕೆಟ್​​​ ದರವನ್ನು ಬಿಹಾರ ಸರ್ಕಾರಕ್ಕೆ ನೀಡುವುದಾಗಿ ಹೇಳಿದ್ದಾರೆ.

ರಾಷ್ಟ್ರೀಯ ಜನತಾದಳದ ನಾಯಕ ತೇಜಶ್ವಿ ಯಾದವ್
ರಾಷ್ಟ್ರೀಯ ಜನತಾದಳದ ನಾಯಕ ತೇಜಶ್ವಿ ಯಾದವ್

ಪಾಟ್ನಾ:ಬಿಹಾರಿ ಕಾರ್ಮಿಕರನ್ನು ಕರೆ ತರುವ 50 ರೈಲುಗಳ ಶುಲ್ಕವನ್ನು, ಕಾರ್ಮಿಕರ ಪರವಾಗಿ ಪಾವತಿಸುವುದಾಗಿ ರಾಷ್ಟ್ರೀಯ ಜನತಾದಳ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್​​ ಸೋಮವಾರ ಪ್ರಕಟಿಸಿದ್ದಾರೆ.

ಈ ಹಿಂದೆ ಅವರು ಕಾರ್ಮಿಕರನ್ನು ಕರೆತರಲು 2 ಸಾವಿರ ಬಸ್​​ಗಳನ್ನು ಸರ್ಕಾರಕ್ಕೆ ನೀಡಲು ಮುಂದಾಗಿದ್ದರು. ಆಡಳಿತಾರೂಢ ನಿತೀಶ್ ಕುಮಾರ್ ಸರ್ಕಾರವನ್ನು ಗುರಿಯಾಗಿಸಿಕೊಂಡು, ಯಾದವ್​ ಸರಣಿ ಟ್ವೀಟ್‌ ಮಾಡಿದ್ದಾರೆ.

"ಬಿಹಾರ ಸರ್ಕಾರಕ್ಕೆ ಸುಮಾರು 40 ಲಕ್ಷ ಬಿಹಾರಿಗಳ ಜೀವನದ ಬಗ್ಗೆ ಕಾಳಜಿ ಇಲ್ಲ. ಅಂದರೆ ಅವರ ಕುಟುಂಬಗಳು ಸೇರಿದಂತೆ ಸುಮಾರು 2 ಕೋಟಿ ಜನರು ಇದ್ದಾರೆ. ಡಿ-ಅಡಿಕ್ಷನ್ (24,000 ಕೋಟಿ ರೂ.), ನೀರಿನ ಹೆಸರಿನಲ್ಲಿ 49,000 ಕೋಟಿ ರೂ. ಮತ್ತು ಹಸಿರು (24,000 ಕೋಟಿ ರೂ.) ಹಾಗೂ ಜಾಹೀರಾತುಗಳ (500 ಕೋಟಿ ರೂ.) ಮೇಲೆ ಸರ್ಕಾರ ಕೋಟಿಗಟ್ಟಲೇ ವೆಚ್ಚ ಮಾಡುತ್ತದೆ. ಆದರೆ, ಬಡವರ ಪ್ರಾಣ ಉಳಿಸಲು ಕೇವಲ 500 ರೂ. ಖರ್ಚು ಮಾಡುವುದಿಲ್ಲ "ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ "ಬಿಹಾರ ಸರ್ಕಾರಕ್ಕೆ ಆರಂಭದಲ್ಲಿ 50 ರೈಲುಗಳ ಹಣ ಪಾವತಿಸಲು ರಾಷ್ಟ್ರೀಯ ಜನತಾದಳ ಸಿದ್ಧವಾಗಿತ್ತು. ಕಾರ್ಮಿಕರ ಪರವಾಗಿ 50 ರೈಲುಗಳಲ್ಲಿ ಬರುವವರಿಗೆ ನಾವು ಶುಲ್ಕವನ್ನು ಬಿಹಾರ ಸರ್ಕಾರಕ್ಕೆ ಪಾವತಿಸುತ್ತೇವೆ. ಮುಂದಿನ ಐದು ದಿನಗಳಲ್ಲಿ ಸರ್ಕಾರ ರೈಲುಗಳ ವ್ಯವಸ್ಥೆ ಮಾಡಲಿ ಮತ್ತು ಪಕ್ಷವು ತಕ್ಷಣವೇ ಸರ್ಕಾರದ ಖಾತೆಗೆ ಶುಲ್ಕವನ್ನು ವರ್ಗಾಯಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ನಿತೀಶ್​ ಕುಮಾರ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ವಲಸೆ ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ತೋರಿದ್ದಾರೆ. ಇದೇ ವಿಷಯವಾಗಿ ಕೆಲ ದಿನಗಳ ಹಿಂದೆ, ತನ್ನ ಸಂಸ್ಥೆಯ 2000 ಬಸ್​​ ಒದಗಿಸುವುದಾಗಿ ಹೇಳಿದ್ದರು.

ಆದರೆ ಸರ್ಕಾರ ಸರ್ಕಾರದ ಬಳಿ ಕೆಲವೇ ಸಾವಿರ ಬಸ್​ಗಳಿವೆ ಅಷ್ಟೊಂದು ಜನರನ್ನ ಒಮ್ಮೆಲೆ ಕರೆತರುವುದು ಅಸಾಧ್ಯ ಎಂದು ಸ್ಪಷ್ಟನೆ ನೀಡಿತ್ತು.

ABOUT THE AUTHOR

...view details